Saturday, May 18, 2024

ಬಿಜೆಪಿ ಸೇರೋದಕ್ಕೆ ಡಿಸಿಎಂ ಡಿಕೆಶಿ ಕಾಯುತ್ತಿದ್ದಾರೆ: ಶಾಸಕ ಮುನಿರತ್ನ ಸ್ಫೋಟ ಹೇಳಿಕೆ

ಬೆಂಗಳೂರು: ಬಿಜೆಪಿ ಸೇರೋದಕ್ಕೆ ಡಿಸಿಎಂ ಡಿಕೆಶಿ ಕಾಯುತ್ತಿದ್ದಾರೆ ಎಂದು ಶಾಸಕ ಮುನಿರತ್ನ ಸ್ಫೋಟ ಹೇಳಿಕೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಾಗಿಲು ತೆಗೆಯೋದಕ್ಕೆ ಡಿಕೆ ಶಿವಕುಮಾರ್​ ಕಾಯ್ತಿದ್ದಾರೆ. ಬಾಗಿಲು ತೆಗೆದ್ರೆ 40 ಜನರ ಜತೆ ಬಿಜೆಪಿಗೆ ಬರಲಿದ್ದಾರೆ ಆದ್ರೆ ನಾವು ಮಾತ್ರ ಬಾಗಿಲು ತೆಗೀತಿಲ್ಲ ಎಂದು ಮುನಿರತ್ನ
ಡಿಸಿಎಂ ಡಿ.ಕೆ.ಶಿವಕುಮಾರ್‌ ಮಾತಿಗೆ ಮುನಿರತ್ನ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ಗೆ ನಾನು ಕೆಲವರನ್ನ ಕಳಿಸ್ತಿದ್ದೇನೆ ಎಂದು ಆರೋಪ ಮಾಡುತ್ತಿದ್ಧಾರೆ.ಅದು ನಾನಲ್ಲ ಅವರೇ ಬಿಜೆಪಿಗೆ ಬರೋದಕ್ಕೆ ರೆಡಿ ಇದ್ದಾರೆಂದು ಕಿಡಿಕಾರಿದ್ದಾರೆ.

ನಮ್ಮ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಮುಖಂಡೆ ಮೇಲೆ ಹಲ್ಲೆಯಾಗಿದೆ.ನನ್ನ ಗಮನಕ್ಕೆ ಈ ವಿಚಾರ ಬಂದಿದೆ.ಆಡಿಯೋ ಕ್ಲಿಪಿಂಗ್ ಬಿಡುಗಡೆ ಆಗಿದೆ.ಆರ್.ಆರ್ ನಗರದಲ್ಲಿ ಗಲಭೆ ವಿಕೋಪಕ್ಕೆ ಹೋಗಿದೆ.ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಪ್ಯಾರಾ ಮಿಲಿಟರಿ ಕೊಡಬೇಕು. ಕಾಂಗ್ರೆಸ್ ನಾಯಕರು ಭೂಗತ ಪಾತಕಿಗಳನ್ನ ಜಾಮೀನು ನೀಡಿ ಕರೆತರ್ತಿದ್ದಾರೆ.ರಾಜ್ಯಾಧ್ಯಕ್ಷರ ಮೂಲಕ ಪತ್ರ ನೀಡಿ ಕೊಡ್ತೀವಿ ಅಂತ ಹೇಳಿದ್ದಾರೆ.ನಾನು ಮಾತನಾಡಿದ್ದೇನೆ, ನಮ್ಮ ಅಧ್ಯಕ್ಷ ವಿಜಯೇಂದ್ರ ಶೀಘ್ರವೇ ಪತ್ರ ಬರೆಯಲಿದ್ದಾರೆ ಎಂದಿದ್ದರು.

 

RELATED ARTICLES

Related Articles

TRENDING ARTICLES