Friday, May 17, 2024

ಪಕ್ಷ ನನಗೆ ತಾಯಿ, ಇದು ಬರಿ ಬಾಯಿ ಮಾತಲ್ಲ, ನನ್ನ ಮನಸಿನ ಮಾತು : ಪ್ರತಾಪ್ ಸಿಂಹ

ಮೈಸೂರು : ಪಕ್ಷ ನನಗೆ ತಾಯಿ ಇದ್ದಾಗೆ. ಇದು ಬರಿ ಬಾಯಿ ಮಾತಲ್ಲ, ಇದು ನನ್ನ ಮನಸಿನ ಮಾತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಮೈಸೂರಿನಿಂದ ಒಬ್ಬ ವ್ಯಕ್ತಿ ಬೇಕು. ಇದಷ್ಟೇ ನಮಗೆ ಮುಖ್ಯ ಎಂದು ತಿಳಿಸಿದರು.

ಪ್ರತಾಪ್ ಸಿಂಹಗೆ ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿತ್ತಾ ಎಂಬ ಪ್ರಶ್ನೆಗೆ, ಜಾಣ್ಮೆಯ ಉತ್ತರ ನೀಡಿದರು. ಅಸಂಬದ್ಧ ಉತ್ತರ ನೀಡಿ ಜಾರಿಕೊಂಡರು. 2014ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂತ ಹೈಕಮಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟರಿ ಅಂತ ಕೇಳಿರಲಿಲ್ಲ ಎಂದು ಹೇಳಿದರು.

ಯದುವೀರ್ ಗೆಲ್ಲಿಸುವುದಷ್ಟೇ ಈಗ ಮುಖ್ಯ

ಈಗಲೂ ಅಷ್ಟೆ ಯಾಕೆ ನನಗೆ ಟಿಕೆಟ್ ತಪ್ಪಿಸಿದ್ದೀರಿ ಅಂತ ನಾನು ಕೇಳಿಯೂ ಇಲ್ಲ. ಅವರು ಹೇಳಿಯೂ ಇಲ್ಲ. ಕಾಂಗ್ರೆಸ್ ಪಕ್ಷದಿಂದ ಆಫರ್ ಇತ್ತು, ಇಲ್ವಾ? ಎಂಬ ಯಾವ ಪ್ರಶ್ನೆಗಳು ಈಗ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಒಡೆಯರ್ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ. ಯದುವೀರ್ ಒಡೆಯರ್​ ಕ್ಷೇತ್ರದ ಜನರ ಆಶೀರ್ವಾದ ಕೇಳಬೇಕು ಎಂದು ಯದುವೀರ್ ಪರ ಪ್ರತಾಪ್ ಸಿಂಹ ಬ್ಯಾಟ್ ಬೀಸಿದರು.

RELATED ARTICLES

Related Articles

TRENDING ARTICLES