Sunday, May 12, 2024

ಯಾರು ಎಷ್ಟೇ ತಿಪ್ಪರಲಾಗ ಹಾಕಿದ್ರೂ ಗೀತಕ್ಕ ಗೆಲ್ತಾರೆ : ಮಧು ಬಂಗಾರಪ್ಪ

ಬೆಂಗಳೂರು : ನಮ್ಮ ಗೀತಕ್ಕ ಅವರನ್ನ ಗೆಲ್ಲೋಕೆ ಮಾತ್ರ ನಿಲ್ಲಿಸುತ್ತಿದ್ದೇವೆ. ಯಾರು ಎಷ್ಟೇ ತಿಪ್ಪರಲಾಗ ಹಾಕಿದ್ರೂ ಸಹ ಗೀತಕ್ಕ ಗೆಲ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಕೂಡ ಕೊನೆಯ ಚುನಾವಣೆಯಲ್ಲಿ ಸೋತಿದ್ದರು. ನಾನು ಒಟ್ಟು ಎಂಟು ಚುನಾವಣೆಯಲ್ಲಿ ಆರು ಬಾರಿ ಸೋತಿದ್ದೇನೆ. ಎರಡು ಬಾರಿ ಅಷ್ಟೇ ಗೆದ್ದೆ ಎಂದರು.

ತಂದೆ ಸೋಲಿಗಿಂತ ನಂದು ದೊಡ್ಡ ಸೋಲು ಅಲ್ಲ ಅಂದಿದ್ರು ಅಕ್ಕ. ಆಗ ನಾವು ಬೇರೆ ಪಕ್ಷದಲ್ಲಿ ಇದ್ದೆವು. ಸಮಯದ ಅಭಾವ ಇತ್ತು. ಲೀಡರ್ ಆಗಿ ಮಧು ಬಂಗಾರಪ್ಪ ಸೋತಿಲ್ಲ, ಸೋಲೋದೂ ಇಲ್ಲ. ಸುರ್ಜೇವಾಲ ಅವರೇ ವಿಧಾನಸಭಾ ಚುನಾವಣೆ ಬಳಿಕ ಶಿವಣ್ಣ ಮನೆಗೆ ಕೃತಜ್ಞತೆ ತಿಳಿಸಲು ಬಂದಿದ್ದರು. ಆಗ ಅವರೇ ಸ್ವತಃ ಚುನಾವಣೆಗೆ ನಿಲ್ಲವು ತಿಳಿಸಿದರು ಎಂದು ತಿಳಿಸಿದರು.

ಗೀತಕ್ಕ ಗೆದ್ದು ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ

ಜೂನ್ ೪ರಂದು ಗೆದ್ದು ಸಚಿವರಾಗಿ ಗೀತಕ್ಕ ಸೇವೆ ಸಲ್ಲಿಸಲಿದ್ದಾರೆ. ಅಧಿಕಾರ ಬರತ್ತೆ ಹೋಗತ್ತೆ. ಆದ್ರೆ, ಅವಕಾಶ ಸಿಕ್ಕಾಗ ಸೇವೆ ಸಲ್ಲಿಸಬೇಕು. ಬಂಗಾರಪ್ಪ ಹೆಸರಿನ ಜೊತೆ ಶಿವಣ್ಣ ಹೆಸರು ಉಳಿಸಲಿದ್ದಾರೆ ಗೀತಾ ಶಿವರಾಜ್ ಕುಮಾರ್. ನಿಮ್ಮ ವಿಶ್ವಾಸ ಕೂಡ ಉಳಿಸಿಕೊಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? : ನಾನು ಬೇರೆ, ಗೀತಾ ಬೇರೆ.. ರಾಜ್ಕುಮಾರ್ಗೂ ಪಾಲಿಟಿಕ್ಸ್ ಬೇಕಾಗಿತ್ತು : ಶಿವಣ್ಣ

ಚುನಾವಣೆ ಮುಗೀತಾ ಇದ್ದಂತೆ ಸಿನಿಮಾ ಮಾಡ್ತೇನೆ

ಮಧು ಬಂಗಾರಪ್ಪ ಎನ್ನುವ ಹೆಸರು ಬಂದಿದ್ದೇ ಬಂಗಾರಪ್ಪ ಅವರಿಂದ. ಜೊತೆಗೆ ಚಿತ್ರರಂಗದಿಂದ ಕೂಡ. ಚುನಾವಣೆ ಮುಗೀತಾ ಇದ್ದಂತೆ ಸಿನಿಮಾ ನಿರ್ಮಾಣ ಮಾಡ್ತೇನೆ. ಅನ್ನದಾತರಾದ ನಿರ್ಮಾಪಕರುಗಳು ಮತದಾರರ ಬೆಂಬಲ ಕೇಳ್ತಿರೋದು ಖುಷಿಯ ವಿಚಾರ. ನನ್ನ ಬ್ರೆಡ್ ಅಂಡ್ ಬಟರ್ ಚಿತ್ರರಂಗ. ಆಕಾಶ್ ಸ್ಟುಡಿಯೋ ಈಗಲೂ ಇದೆ. ಮತ್ತೆ ಸಿನಿಮಾ ಮಾಡ್ತೀವಿ ಎಂದು ಮಧು ಬಂಗಾರಪ್ಪ ಹೇಳಿದರು.

RELATED ARTICLES

Related Articles

TRENDING ARTICLES