Friday, May 3, 2024

ವಿ. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ: ಮಾಧುಸ್ವಾಮಿ

ತುಮಕೂರು: ವಿ. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ ಎಂದು ಮಾಜಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಪರ ನಾನು ಕೆಲಸ ಮಾಡಲ್ಲ.ಪ್ರತಾಪ್ ಸಿಂಹ, ಸಿ.ಟಿ.ರವಿ ಮೋದಿ ಮುಖ‌ ನೋಡಿ ಕೆಲಸ ಮಾಡಬಹುದು. ಆದರೆ‌ ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ.ನನಗೆ ಮೋದಿ, ಅಮಿತ್ ಶಾ ಅವರ ಮೇಲೆ ಅಪಾರ ಗೌರವವಿದೆ.ಆದರೆ ವಿ.ಸೋಮಣ್ಣ ಹೊರಗಿನಿಂದ ಬಂದವರು ಅವರು ಗೆಲ್ಲೋದು ಇಲ್ಲಿಯ ಮತದಾರರಿಗೆ ಇಷ್ಟವಿಲ್ಲ ಎಂದು ಕುಟುಕಿದರು.

ನಾನು ಯಾರಿಗೂ ಹೋಗಿ ಸೀಟ್ ಕೇಳಿಲ್ಲ.ನಾನು ಈಗಾಗಲೇ ಹೇಳಿದ್ದೀನಿ.ಯಡಿಯೂರಪ್ಪನವರೇ ನನ್ನನ್ನ ಮೂರ್ನಾಲ್ಕು ಬಾರಿ ಕರೆಸಿ,ಟಿಕೆಟ್ ಕೊಡೋದಾಗಿ ನನ್ನನ್ನು ಟೆಂಪ್ಟ್ ಮಾಡಿದ್ದರು.ನಾನು ಸಾಕ್ಷಿ ಕೂಡ ಇಟ್ಟುಕೊಂಡಿದ್ದೀನಿ.ನಾನು ದೇವರನ್ನೇ ಒಪ್ಪದೋನು.ಅವರು ಅಷ್ಟೆಲ್ಲ ಹೇಳಿದ ಮೇಲೆ ಅವರ ಮೇಲೆ ನಂಬಿಕೆ ಇಟ್ಟುಕೊಂಡು ಕೂತಿದ್ದೆ.ಗಣೇಶನ ಥರ ಅವರ ಸುತ್ತ ಸುತ್ತುತ್ತೀನಿ ಅಂದಿದ್ದೆ.ಈಗ ಟಿಕೆಟ್ ಕೊಡಿಸುವಲ್ಲಿ‌ ಅವರು ವಿಫಲರಾಗಿದ್ದಾರೆ. ನನ್ನನ್ನ ನಡುದಾರಿಯಲ್ಲಿ ಕೈ ಬಿಟ್ಟಿದ್ದಾರೆ.ಅಪ್ಪ ಮಕ್ಕಳ ಅಸ್ಥಿತ್ವಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಯಡಿಯೂರಪ್ಪನ ಮೇಲೆ ಬೇಸರ ವ್ಯಕ್ತಪಡಿಸಿದ್ದರು.

ಸೋಮಣ್ಣ ಗೆಲ್ಲೋದು ನನ್ನಗೂ ಸೇರಿ ಬಸವರಾಜು ಅವರಿಗೂ ಇಷ್ಟವಿಲ್ಲ.ಹಾಗಂತ ನಾನು ಕಾಂಗ್ರೆಸ್ ಗೆ‌ ಹೋಗುತ್ತೇನೆ ಎಂದು ತಪ್ಪು ತಿಳಿಯಬೇಡಿ. ಸೋಮಣ್ಣ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತಿದ್ದೆ. ಸೋಮಣ್ಣರನ್ನ ಬಲಿ ಕೊಡಲು ಸಂಸದ ಬಸವರಾಜು ಕರೆದುಕೊಂಡು ಬಂದಿದ್ದಾರೆ.
ಕಾಂಗ್ರೆಸ್ ಜೊತೆ ಬಸವರಾಜು ಸಂಬಂಧ ಚೆನ್ನಾಗಿದೆ.ಎಂದರು.

ಕೆ.ಎನ್‌ ರಾಜಣ್ಣ ತಮಗೆ ಎರಡೂ ಪಕ್ಷದಲ್ಲಿ ಸ್ನೇಹಿತರಿದ್ದಾರೆ ನಾವು ಗೆಲ್ತಿವಿ ಅಂದಿದ್ದರು.ಜಿ‌.ಎಸ್.ಬಸವರಾಜು ರಾಜಣ್ಣರ ಋಣ ತೀರಿಸಬೇಕಾಗಿದೆ.ಹಾಗಾಗಿ ಇವರೆಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂದರು.

RELATED ARTICLES

Related Articles

TRENDING ARTICLES