ಬೆಂಗಳೂರು : ಸಂಸದ ಪ್ರತಾಪ್ ಸಿಂಹ ಅವರು ಎರಡು ವರ್ಷದ ಅವಧಿಯಲ್ಲಿ ಒಳ್ಳೆಯ ಅಡಿಪಾಯ ಹಾಕಿದ್ದಾರೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರ ಸಹಕಾರ ಇದ್ರೆ ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಪ್ರತಾಪ್ ಸಿಂಹ ಅವರು ಒಳ್ಳೆಯ ಅಭಿವೃದ್ಧಿ ಕಾರ್ಯ ಮಾಡ್ತಾ ಇದ್ದಾರೆ. ಪ್ರತಾಪ್ ಸಿಂಹ ಜೊತೆ ಯಾವಾಗಲೂ ನಾನು ಸಂಪರ್ಕದಲ್ಲಿ ಇದ್ದೇನೆ. ಅವರ ಬೆಂಬಲ ಇರುತ್ತದೆ. ಒಂದು ವರ್ಷಗಳ ಹಿಂದೆಯೇ ನನಗೆ ಚುನಾವಣೆ ಯೋಚನೆ ಬಂದಿತ್ತು. ಈಗ ಸ್ಕೇಲ್ ದೊಡ್ಡದಾಗುತ್ತೆ, ಅಧಿಕಾರ ಇದ್ದರೆ ಇನ್ನೂ ಒಳ್ಳೆಯ ಕೆಲಸ ಮಾಡೋಕೆ ಆಗತ್ತೆ ಎಂದು ಹೇಳಿದರು.
ಜನರ ಋಣ ತೀರಿಸಲು ಇದು ಒಂದು ಅವಕಾಶ
ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಸಾರ್ವಜನಿಕ ಬದುಕಿಗೆ ಬಂದ ಮೇಲೆ ಸಾರ್ವಜನಿಕವಾಗಿ ಇರಬೇಕಾಗುತ್ತದೆ. ಮೈಸೂರು ಜವಬ್ದಾರಿ ಆದ ಬಳಿಕ ಒಂಬತ್ತು ವರ್ಷಗಳಿಂದ ನಾನು ಜನರ ಜೊತೆ ಇದ್ದೆ. ಅವರು ನನ್ನ ಸಹೋದರ ತರ ನೋಡಿದ್ದಾರೆ. ಜನರ ಋಣ ತೀರಿಸೋಕೆ ಇದು ಒಂದು ಅವಕಾಶ ಎಂದು ಯದುವೀರ್ ಅಭಿಪ್ರಯಪಟ್ಟರು.