ಬೆಂಗಳೂರು : ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರ ಇನ್ನೂ ಏನಾನಾಗಿದ್ಯೋ ಗೊತ್ತಿಲ್ಲ. ನಾನೇನು ಇನ್ನೂ ಚಿಕ್ಕ ಹುಡುಗ ಅಲ್ಲ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಯಾಗಿ ಅಧಿಕಾರ ಬಂದಾಗ ಕೆಲವರಿಗೆ ಮಾತ್ರ ಸೀಮಿತವಾಗಬಾರದು. ಎಲ್ಲಾರಿಗೂ ಅಧಿಕಾರ ತಲುಪಿಸಿದವನೇ ನಾಯಕ. ಅವ್ರು ಕೂಡ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಪಾದರಸ ಅಂತ ವ್ಯಕ್ತಿ, ಓಡಾಡ್ತಿದ್ದಾರೆ. ನಮ್ಮವನು, ನಿಮ್ಮವನು ಅನ್ನೋದನ್ನ ಬಿಡಬೇಕು. ಆ ಜಿಲ್ಲೆಯಲ್ಲಿ ನಾನು ಕೂಡ ಬೇಕಾದಷ್ಟು ಮಾಡಿದ್ದೀನಿ. ಅವ್ರು 100 ದಿನದಲ್ಲಿ ಮಾಡೋದನ್ನ ನಾನು ಮೂರೇ ದಿನದಲ್ಲಿ ಮಾಡಿದ್ದೀನಿ. ಸೋಮಣ್ಣ ಕೆಲಸಗಾರ ಅನ್ನೋದು ಎಲ್ಲರಿಗೂ ಗೊತ್ತು ಎಂದು ಚಾಟಿ ಬೀಸಿದರು.
ಡಿ.ಕೆ. ಶಿವಕುಮಾರ್ ದೂರದೃಷ್ಟಿ ನಾಯಕ
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ದೂರದೃಷ್ಟಿಯುಳ್ಳ ನಾಯಕರು. ಅವರು ಏನು ಮಾಡುತ್ತಾರೆಯೋ ಗೊತ್ತಿಲ್ಲ. ಆಸ್ತಿ ತೆರಿಗೆ ಹೆಚ್ಚಳ ಸಾಧಕ ಬಾಧಕ ನೋಡಿಕೊಂಡು ಮಾತನಾಡುತ್ತೇನೆ ಎಂದು ವಿ. ಸೋಮಣ್ಣ ಹೇಳಿದರು.