ಬೆಂಗಳೂರು : ಅರಮನೆಯಿಂದ ಬಂದೋರು ಇದೂವರೆಗೂ ಯಾರೂ ಜನತಂತ್ರದಲ್ಲಿ ಗೆದ್ದಿಲ್ಲ. ಈಗಲೂ ಕೂಡ ಯದುವೀರ್ಗೆ ಅಷ್ಟು ಸುಲಭವಲ್ಲ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಮನೆತನವನ್ನ ಸಾಮಾನ್ಯ ಮನೆಯಂತೆ ಇಂದಿರಾಗಾಂಧಿ ಇಟ್ಟಿದ್ರು. ಶ್ರೀಕಂಠದತ್ತ ಒಡೆಯರ್ ಕಾಂಗ್ರೆಸ್ನಿಂದ ಎರಡು ಬಾರಿ ಗೆದ್ದಿದ್ರು. ಆದ್ರೆ, ಬಿಜೆಪಿ ಪಕ್ಷದಿಂದ ಸೋತಿದ್ರು ಎಂದು ತಿಳಿಸಿದರು.
ಯದುವೀರ್ ಅವರ ಸ್ಪರ್ಧೆ ಬಗ್ಗೆ ಚರ್ಚೆ ಆಗ್ತಿದೆ. ಯದುವಂಶದವರು, ಅರಸರು ಅಗಲಿದರೂ ಅವರ ಕೆಲಸ ಅಜರಾಮರ. ಅನ್ನ, ನೀರು, ಶಿಕ್ಷಣ ಎಲ್ಲಾ ಅರಸರು ಕೊಟ್ಟಿದ್ರು. ಯದುವೀರ್ ಅವರನ್ನು ಅಭ್ಯರ್ಥಿ ಮಾಡ್ತಾರೆ. ಪ್ರತಾಪ್ ಸಿಂಹ ಮೈಸೂರು-ಕೊಡಗಿನ ಸಂಸದರಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಪ್ರತಾಪ್ ಸಿಂಹ ಬಗ್ಗೆ ನಾನು ಯೆಸ್ ಅಂತೀನಿ
ಪಕ್ಷ ಯಾವುದೇ ಇದ್ದರೂ ಕೆಲಸ ಮಾಡಿದ್ದಾರೆ. ನಮ್ಮ ಕೆಲಸಕ್ಕಿಂತ ಹೆಚ್ಚಾಗಿ ನಮ್ಮ ನಡವಳಿಕೆ ಜನ ಗಮನಿಸ್ತಾರೆ. ಜನರಿಗೆ ವಿರೋಧಿ ಅಂತ ಕಂಡಾಗ ಪರಿಣಾಮ ಬೇರೆಯದ್ದೇ ಆಗುತ್ತೆ. ರಾಜಕಾರಣಿಯಾಗಿ ಪ್ರತಾಪ್ ಸಿಂಹ ಬಗ್ಗೆ ನಾನು ಯೆಸ್ ಅಂತೀನಿ. ನಿನ್ನೆ ಕಣ್ಣೀರು ಹಾಕಿದ್ದಾರೆ, ನೋವಾಗಿರಬಹುದು ಎಂದು ಹೆಚ್. ವಿಶ್ವನಾಥ್ ಬೇಸರಿಸಿದರು.