ಯಾದಗಿರಿ: ಪತ್ನಿಯನ್ನ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಯಾದಗಿರಿ ತಾಲೂಕಿನ ಮಲ್ಹಾರ್ ತಾಂಡದಲ್ಲಿ ನಡೆದಿದೆ.
ಸೋನಿಬಾಯಿ (40) ಕೊಲೆಯಾಗಿರುವ ದುದೈರ್ವಿ. ಮಲ್ಲಪ್ಪ (45)ತನ್ನ ಹೆಂಡತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಮಾಡಿದ್ದಾನೆ.
ಕಂಠ ಪೂರ್ತಿ ಕುಡಿದು ಬಂದು ನಿನ್ನೆ ರಾತ್ರಿ ಸೋನಿಬಾಯಿ ಹಾಗೂ ಅರ್ಜುನ ಮನೆಯಲ್ಲಿ ಮಲಗಿದ್ದಾಗ ಈತ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ.ತಡೆಯಲ್ಲಿ ಹೋದ ಮಗನ ಮೇಲೆ ಈತ ಹಲ್ಲೆ ಮಾಡಿದ್ದು,ಮಗನಿಗೂ ಸಹಾ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಅರ್ಜುನ್ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಇತಂಹ ದುರ್ಘಟನೆ ನಡೆದಿದೆ.