Friday, May 17, 2024

ಸುಲೇಮಾನ್ ಸಿಗಬೇಕೇ ಹೊರತು ಶಿವಪ್ಪ ಸಿಗಲ್ಲ: ಯತ್ನಾಳ್ ಲೇವಡಿ

ವಿಜಯಪುರ: ಸುಲೇಮಾನ್ ಸಿಗಬೇಕೇ ಹೊರತು ಶಿವಪ್ಪ ಸಿಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​​​ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ.

ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಓರ್ವನ ಬಂಧನ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಲೇಮಾನ್ ಸಿಗಬೇಕೇ ಹೊರತು ಶಿವಪ್ಪ ಸಿಗಲ್ಲ.ಅಜಗರ್, ಅಹಮ್ಮದ್ ಸಿಗಬೇಕು ಎಂದು ಪರೋಕ್ಷವಾಗಿ ಬಾಂಬ್ ಸ್ಪೋಟದಲ್ಲಿ ಮುಸ್ಲಿಮರೇ ಸಿಗ್ತಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಸ್ಪೋಟದ ತನಿಖೆ ಇನ್ನು ಆಳವಾಗಿ ನಡೆಯಬೇಕು.ಇದು ಸಾಮಾನ್ಯ ಪ್ರಕರಣ ಅಲ್ಲವೇ ಅಲ್ಲ ಕಾಂಗ್ರೆಸ್​ನ ಕೆಲ ಮಂತ್ರಿಗಳು ಇಮ್ಯಾಚುವರ್ ಆಗಿ ಹೇಳಿಕೆ ಕೊಟ್ಟಿದ್ದಾರೆ.ಅಂದು ಸಿಲ್ಲಿ ಹೇಳಿಕೆ ನೀಡಿದವರಿಗೆ ಇವತ್ತು ಮುಖವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಗೃಹ ಸಚಿವರೆ ಖರ್ಗೆಯವರಿಗೆ ಛೀಮಾರಿ ಹಾಕಿದ್ದಾರೆ.ಖರ್ಗೆ ಬೇಜವಬ್ದಾರಿ ಹೇಳಿಕೆ ಕೊಡೊದು ಬಿಟ್ಟು ತಮ್ಮ ಇಲಾಖೆಯಲ್ಲಿ ಚೆನ್ನಾಗಿ ಕೆಲಸ ಮಾಡಲಿ.ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡೋದು ಬಿಟ್ಟು ಹಿಂದೂಗಳಿಗೆ ಬೈತಿದ್ದಾರೆ.ಕಲಬುರ್ಗಿಯಲ್ಲಿ ನಿತ್ಯ ಬಿಜೆಪಿ ಕಾರ್ಯಕರ್ತ ಕೊಲೆ ಆಗ್ತಿದೆ.ಕಾನೂನು ಸೂವ್ಯವಸ್ಥೆ ಸರಿಪಡೆಸಬೇಕು, ಹೀಗೆ ಮಾಡಿದ್ರೆ ಅವರ ಗೌರವ ಕಡಿಮೆ ಆಗುತ್ತೆ ಎಂದು ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಗುಡುಗಿದ್ದರು.

RELATED ARTICLES

Related Articles

TRENDING ARTICLES