ಬೆಂಗಳೂರು: ಶಿವರಾತ್ರಿ ಹಬ್ಬಕ್ಕೆ KSRTC ವತಿಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಹಬ್ಬಕ್ಕೆ ಊರುಗಳಿಗೆ ತೆರಳುವ ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಾರ್ಚ್ 8 ಶುಕ್ರವಾರ ಶಿವರಾತ್ರಿ ಸರ್ಕಾರಿ ರಜೆ, ಮಾರ್ಚ್ 9 ಎರಡನೆ ಶನಿವಾರ ಮತ್ತು ಮಾರ್ಚ್ 10 ಭಾನುವಾರ, ಹೀಗೆ ಮೂರು ದಿನಗಳ ರಜೆ ಇರುವ ಕಾರಣ, ಬೆಂಗಳೂರಿನಿಂದ ಹೊರ ಊರುಗಳಿಗೆ ತೆರಳುವ ಪ್ರಯಾಣಕಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಹಾಗಾಗಿ ಪ್ರಯಾಣಿಕರು ಹಬ್ಬದ ದಿನದಂದು ಊರುಗಳಿಗೆ ಹಾಗೂ ದೇವಾಲಯಗಳಿಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ: ನಾಸಿರ್ ಹುಸೇನ್ ದೇಶಕ್ಕೆ ಆಪತ್ತು ತರುವ ವ್ಯಕ್ತಿ
ಕೆಎಸ್ಆರ್ಟಿಸಿ ವತಿಯಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ 1,500 ಬಸ್ಗಳನ್ನ ಬಿಡಲಾಗಿದೆ.