Monday, May 20, 2024

ಹೈಕೋರ್ಟ್​ ನ್ಯಾಯಾದೀಶ ಹುದ್ದೆಗೆ ರಾಜೀನಾಮೇ ನೀಡಿ ಬಿಜೆಪಿ ಸೇರಿದ ನ್ಯಾಯಮೂರ್ತಿ!

ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಗುರುವಾರ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಉದ್ದೇಶದಿಂದ ರಾಷ್ಟ್ರೀಯ ಪಕ್ಷ ಬಿಜೆಪಿ ಸೇರುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಸವಾಲ್ ಯಾಕೆ ಕುಸ್ತಿ ಆಡೋಕೆ ಬರಲಿ ನೋಡೋಣ : ಶಾಮನೂರು ಶಿವಶಂಕರಪ್ಪ

ನ್ಯಾ. ಗಂಗೋಪಾಧ್ಯಾಯ ಅವರು ಇದೇ 2024ರಲ್ಲಿ ಸೇವಾನಿವೃತ್ತಿಯನ್ನು ಹೊಂದುವವರಿದ್ದರು, ಅವಧಿಗೂ ಮುನ್ನ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ಅವರಿಗೆ ಮಂಗಳವಾರ ಕಳುಹಿಸಿದ್ದಾರೆ. ಇದರ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ಕೊಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿದ್ದಾರೆ.

ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ತ್ವರಿತ ಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿವುದರಲ್ಲಿ ನ್ಯಾ. ಅಭಿಜಿತ್ ಖ್ಯಾತಿ ಪಡೆದಿದ್ದರು. ಕೆಲವೊಂದು ಪ್ರಕರಣಗಳನ್ನು ಕೆಲ ಗಂಟೆಗಳಲ್ಲೇ ಇತ್ಯರ್ಥಪಡಿಸಿದ ಉದಾಹರಣೆಗಳೂ ಇವೆ.

RELATED ARTICLES

Related Articles

TRENDING ARTICLES