ಚಿಕ್ಕಮಂಗಳೂರು: ದುಡ್ಡಿನ ಮದದಿಂದ ನನ್ನ ವಿರುದ್ಧ ಷಡ್ಯಂತ್ರ ಮಾಡಿಸ್ತವ್ರೆ ಎಂದು ‘ಗೋ ಬ್ಯಾಕ್ ಶೋಭಾ‘ ಅಭಿಯಾನಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಇದೀಗ ಖಡಕ್ ತಿರುಗೇಟು ನೀಡಿದ್ದಾರೆ
ನಗರದಲ್ಲಿ ಮಾತನಾಡಿದ ಅವರು, “ಹಣದ ಮದ, ದರ್ಪ ಅಹಂಕಾರ, ಗಂಡಸು ಎಂಬ ಅಧಿಕಾರದ ದಾಹದಿಂದ ಹೀಗೆಲ್ಲಾ ಮಾಡಿಸುತ್ತಿದ್ದಾರೆ. ಯಾರು ಮಾಡಿಸಿದ್ದಾರೆ ಎಂದು ನನಗೆ ಗೊತ್ತು,ಇದಕ್ಕೆ ಹೈ ಕಮಾಂಡ್ ಉತ್ತರ ಕೊಡುತ್ತದೆ” ಎಂದು ಹೇಳಿದರು.
ಹಣವಿದೆ ಎಂಬ ಅಹಂಕಾರ, ದರ್ಪ,ದುಡ್ಡಿನ ಮದ ಹೀಗೆಲ್ಲಾ ಮಾಡಿಸುತ್ತಿದ್ದು, ಗಂಡಸರಿಗೆ ನನ್ನ ಹತ್ತಿರವೇ ಎಲ್ಲಾ ಅಧಿಕಾರ ಇರಬೇಕು ಎಂಬುದು ಇರುತ್ತದೆ” ಎಂದು ಪರೋಕ್ಷವಾಗಿ ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿರುವವರಿಗೆ ಖಡಕ್ ಉತ್ತರ ಕೊಟ್ಟರು.
ಏನೇ ಷಡ್ಯಂತ್ರ ನಡೆಸಿದರೂ ಹಿರಿಯರು ನನ್ನ ಜೊತೆ ಇದ್ದಾರೆ
,ಬಿಜೆಪಿ ಪಕ್ಷದ ಹೈ ಕಮಾಂಡ್ಗೆ ಗೋ ಬ್ಯಾಕ್ ನಡೆಸಿದವರ ಬಗ್ಗೆ ಸಂಪೂರ್ಣ ವರದಿ ತಲುಪಿದ್ದು, ಕೇಂದ್ರ ವರಿಷ್ಠರು ಎಲ್ಲದಕ್ಕೂ ಉತ್ತರ ಕೊಡುತ್ತಾರೆ” ಎಂದು ತಿಳಿಸಿದ್ದರು.
ರಾಜಕೀಯ ಜೀವನದಲ್ಲಿ ಏಳು–ಬೀಳು ಸಹಜ
ನಾನು ಭ್ರಷ್ಟಾಚಾರ ಮಾಡದೇ ಕೆಲಸ ಮಾಡಿದ್ದೇನೆ. ಕೇಂದ್ರದ ಯೋಜನೆಗಳನ್ನು ಉಡುಪಿ-ಚಿಕ್ಕಮಗಳೂರು ಎರಡೂ ಜಿಲ್ಲೆಗೆ ತಂದಿದ್ದೇನೆ. ನಾನು ರಾಜ್ಯ ರಾಜಕಾರಣದಲ್ಲಿ ಇದ್ದಾಗಲೂ ಷಡ್ಯಂತ್ರ ಇತ್ತು” ಎಂದು ಶೋಭಾ ಕರಂದ್ಲಾಜೆ ಹೇಳದ್ದರು.