ಬೆಂಗಳೂರು: ಬಿಜೆಪಿಯವ್ರನ್ನ ನಂಬಿಕೊಂಡು ಹೋದ್ರೆ ಚಿಪ್ಪೇ ಗ್ಯಾರಂಟಿ ಎಂದು ಸಚಿವ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಮತ ಕಡಿಮೆಯಾಗಿದ್ದಾರೆ, ಯಾಕೆ ಅವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಾರೆ..? ಈ ವಿಷಯದ ಬಗ್ಗೆ ಕುಮಾರಸ್ವಾಮಿಯವರನ್ನೂ ನೀವು ಕೇಳಿದ್ರೆ ಗೊತ್ತಾಗಿತ್ತೆ ಯಾಕೆಂದ್ರೆ ಈ ಹಿಂದೆ ನನಗೂ ಈ ಅನುಭವವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ಧಾರೆ.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ; 3 ನಿಮಿಷಕ್ಕೊಂದು ರೈಲು
ನಾನು ಬಿಜೆಪಿಗೆ ಸಪೋರ್ಟ್ ಮಾಡಿದಾಗ ನನ್ನನ್ನ ಅನರ್ಹ ಮಾಡಿದ್ರು ಈಗ ಪ್ರತಾಪ್ ಗೌಡ ಪಾಟೀಲ್ ಪರಿಸ್ಥಿತಿ ಏನಾಗಿದೆ..? ನಮಗೆ ಯಾರ ಮತಗಳೂ ಬೇಕಿಲ್ಲ, ಯಾವ ಭಯವೂ ಇಲ್ಲ
ಇಷ್ಟು ದಿನ ಎಲ್ಲಾ ಶಾಸಕರು ಅಸೆಂಬ್ಲಿಯಲ್ಲಿ ಭಾಗಿಯಾಗಿದ್ಧೇವೆ. ನಮ್ಮ ಮೂವರು ಅಭ್ಯರ್ಥಿಗಳು ಲೋಕಸಭೆಯಲ್ಲಿ ಗೆದ್ದೆ ಗೆಲ್ಲುತ್ತಾರೆ ಎಂದು ಹೇಳಿದ್ದರು.