ಬೆಂಗಳೂರು : ಎಲ್ಲವನ್ನೂ ನೋಡ್ತಾ ಇದ್ದೀನಿ, ಭಾಷೆ ಸರಿಯಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಡಿಬಾಸ್ ‘ತಗಡು’ ಪದ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಫೋಟೋ ಚಿತ್ರದ ಸಂದರ್ಶನ ವೇಳೆ ಪವರ್ ಟಿವಿ ಜೊತೆ ಮಾತನಾಡಿದ ಅವರು, ಕನ್ನಡ ಭಾಷೆಯನ್ನ ಎಲ್ಲರೂ ಅಣ್ಣಾವ್ರಿಂದ ಕಲಿಯಬೇಕು. ಭಾಷೆ ಅಂದ್ರೆ ಕನ್ನಡ ಮಾತಾಡೋದಲ್ಲ. ಅದರಲ್ಲಿನ ವಿನಯ, ಜ್ಞಾನ, ಅನುಭವ. ಭಾಷೆಯಿಂದ ಸೌಂದರ್ಯ ಹೊರಗಡೆ ಬರಲಿದೆ ಎಂದಿದ್ದಾರೆ.
ಇನ್ನು ಸುಮ್ನೆ ಮಾತಾಡೋದ್ರಿಂದ ಕಿರಿಕಿರಿ ಆಗುತ್ತೆ. ಕೇಳೋಕೆ ಕಷ್ಟ ಆಗುತ್ತೆ. ಮುಜುಗರ ಆಗುತ್ತೆ. ನನಗಂತೂ ಬಹಳ ಮುಜುಗರವಾಗುತ್ತದೆ. ಡಾ. ರಾಜ್ಕುಮಾರ್ ಅವರು ಏನು ಮಾತಾಡ್ತಿದ್ರು? ಆ ಭಾಷೆಯಲ್ಲಿ ಧೀಮಂತಿಕೆ ಇರುತ್ತಿತ್ತು. ಘನತೆ, ಗಾಂಭೀರ್ಯ, ಪ್ರೀತಿ, ಅಗಾಧ ಜ್ಞಾನ ಕಾಣುತ್ತಿತ್ತು. ಕಲಾವಿದನಿಗೆ ಜನರ ಪ್ರೀತಿ ಸಿಗ್ತಿದ್ದಂತೆ ಸುಂದರವಾಗಬೇಕು. ಅಸಹ್ಯ ಆಗಬಾರದು ಎಂದು ಕಲಾವಿದರಿಗೆ ಕಿವಿ ಮಾತು ಹೇಳಿದರು.
ಇದನ್ನೂ ಓದಿ:ಮಾರ್ಚ್ 5 ರಿಂದ ರಾಷ್ಟ್ರ ಮಟ್ಟದ ತೋಟಗಾರಿಕಾ ಮೇಳ!
ಮೊನ್ನೆಯಷ್ಟೇ ಕಾಟೇರ ಸಿನಿಮಾದ 50 ದಿನಗಳ ಸಂಭ್ರಮಾಚರಣೆ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಅಯ್ಯೋ ತಗಡೇ ಎಂದು ಪದ ಬಳಕೆ ಮಾಡಿ ಮಾತನಾಡಿದ್ದರು.