ಬೆಂಗಳೂರು: ಅಭಿವೃದ್ಧಿ ಶೂನ್ಯತೆಯಿಂದ ಸೊರಗುತ್ತಿರುವ ಪರಿಸ್ಥಿತಿಯಲ್ಲಿ ನಿಮ್ಮ ಬಂಗಲೆಗೆ ನವಕೋಟಿ ಸಿಂಗಾರದ ಶೋಕಿ ಬೇಕಿತ್ತಾ..? ಮಜಾವಾದಿ ಸಿಎಂ ಸಿದ್ದರಾಮಯ್ಯನವರೇ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವರ ಅವರು,ರೈತರಿಗೆ ಬರ ಪರಿಹಾರ ನೀಡಲು ಹಣವಿಲ್ಲ ಎಂದು ಕೈಚೆಲ್ಲಿ ಕೂತಿರುವ ನೀವು ತಮ್ಮ ಬಂಗಲೆ ನವೀಕರಣಕ್ಕೆ ಕನ್ನಡಿಗರ ತೆರಿಗೆ ಹಣದಲ್ಲಿ 9 ಕೋಟಿ ರೂಪಾಯಿ ಉಡೀಸ್ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಬಾಯಿ ಬಿಟ್ಟರೆ ಸಮಾಜವಾದ, ಸಾಮಾಜಿಕ ನ್ಯಾಯ ಅಂತ ಬುರುಡೆ ಬಿಡುತ್ತೀರ..? ರಾಜ್ಯದ ಜನತೆ ಭೀಕರ ಬರ, ಸಾಲದ ಹೊರೆ, ಅಭಿವೃದ್ಧಿ ಶೂನ್ಯತೆಯಿಂದ ಸೊರಗುತ್ತಿರುವ ಪರಿಸ್ಥಿತಿಯಲ್ಲಿ ಇಂತಹ ಎಲ್ಲಾ ಶೋಕಿಗಳು ನಿಮ್ಮಗೆ ಬೇಕಿತ್ತಾ? ಎಂದು ಬರೆದುಕೊಂಡಿದ್ದಾರೆ.
ರೈತರಿಗೆ ಬರ ಪರಿಹಾರಕ್ಕೆ ಬರೀ ಎರಡು ಸಾವಿರ
ಸಿಎಂ ಬಂಗಲೆಗೆ ನವಕೋಟಿ ಸಿಂಗಾರರೈತರಿಗೆ ಬರ ಪರಿಹಾರ ನೀಡಲು ಹಣವಿಲ್ಲ ಎಂದು ಕೈಚೆಲ್ಲಿ ಕೂತಿರುವ ಸಿಎಂ @siddaramaiah ನವರು, ತಮ್ಮ ಬಂಗಲೆ ನವೀಕರಣಕ್ಕೆ ಕನ್ನಡಿಗರ ತೆರಿಗೆ ಹಣದಲ್ಲಿ 9 ಕೋಟಿ ರೂಪಾಯಿ ಉಡೀಸ್ ಮಾಡಿದ್ದಾರೆ.
ಬಾಯಿ ಬಿಟ್ಟರೆ ಸಮಾಜವಾದ, ಸಾಮಾಜಿಕ ನ್ಯಾಯ ಅಂತ ಬುರುಡೆ ಬಿಡುವ… pic.twitter.com/Y120fNAncp
— R. Ashoka (ಆರ್. ಅಶೋಕ) (@RAshokaBJP) February 24, 2024