Saturday, May 18, 2024

ಕಾಂಗ್ರೆಸ್ ಭ್ರಷ್ಟಾಚಾರ ಪ್ರಶ್ನಿಸಬೇಕಾ? ಸರಿಯಾಗಿ ಊಟ ಸಿಗುತ್ತಿಲ್ಲ ಅಂತ ಪ್ರಶ್ನಿಸಬೇಕಾ? : ಈಶ್ವರಪ್ಪ ಕಿಡಿ

ದಾವಣಗೆರೆ : ಧೈರ್ಯವಾಗಿ ಪ್ರಶ್ನಿಸು ಎಂದು ಹೇಳಿದ್ದಾರೆ, ಏನನ್ನು ಪ್ರಶ್ನಿಸಬೇಕು? ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಪ್ರಶ್ನಿಸಬೇಕಾ..?ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸ್ಟೆಲ್​ನಲ್ಲಿ ಸರಿಯಾಗಿ ಊಟ ಸಿಗುತ್ತಿಲ್ಲ ಎಂದು ಪ್ರಶ್ನಿಸಬೇಕಾ? ವಿದ್ಯಾರ್ಥಿಗಳಿಗೆ ಸರಿಯಾದ ಶಿಕ್ಷಣ ಸಿಗದೇ ಇರುವುದನ್ನು ಪ್ರಶ್ನಿಸಬೇಕಾ? ಏನನ್ನು ಪ್ರಶ್ನಿಸಬೇಕು? ಎಂದು ಕುಟುಕಿದರು.

ರಾಷ್ಟ್ರಕವಿ ಕುವೆಂಪುರವರು ಐಕ್ಯತೆಗಾಗಿ ಈ ಸಾಲುಗಳನ್ನು ಬರೆದಿದ್ದರು. ಈ ಕಾಂಗ್ರೆಸ್​ನವರು ನಮ್ಮ ದೇಶದ ಸಂಸ್ಕೃತಿಯನ್ನೇ ಪ್ರಶ್ನೆ ಮಾಡಿದ್ದಾರೆ. ಇದು ಕುವೆಂಪು ಅವರಿಗೆ ಅವಮಾನ ಮಾಡಿದಂತೆ. ಈ ಪ್ರಕರಣವನ್ನು ಕಾಂಗ್ರೆಸ್​ನ ಹಲವು ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವರನ್ನು ಕ್ಯಾಬಿನೆಟ್​ನಿಂದ ತೆಗೆದುಹಾಕಿ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಒದ್ದಾಡಿಕೊಂಡು ಇದಕ್ಕೆ ವಿರೋಧ‌ ಮಾಡಿದ್ದಾರೆ. ಮಧು ಬಂಗಾರಪ್ಪ ಹೇಳಿಕೆಯನ್ನು ನಾನು ಸ್ವಾಗತ ಮಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಇದು ಗೊತ್ತಿಲ್ವಾ..? ಗೊತ್ತಿಲ್ಲದೆ ಅಧಿಕಾರಿಗಳು ಮಾಡಿದರೆ ಕೂಡಲೇ ಸಚಿವರನ್ನು ಕ್ಯಾಬಿನೆಟ್​ನಿಂದ ತೆಗೆದುಹಾಕಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

RELATED ARTICLES

Related Articles

TRENDING ARTICLES