Saturday, May 11, 2024

ಲೋಕಸಭಾ ಚುನಾವಣೆ: ಹಾಸನದಲ್ಲಿ ಜೆಡಿಎಸ್‌ ಗೆಲ್ಲಬೇಕು!- ಹೆಚ್​.ಡಿ ಕುಮಾರಸ್ವಾಮಿ

ಹಾಸನ : ಜೆಡಿಎಸ್​ ನ ಸರ್ವನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ರಾಜ್ಯದ ಅಭಿವೃದ್ದಿಗಾಗಿಯೇ ಜೆಡಿಎಸ್​ ದೆಹಲಿ ಮಟ್ಟದ ಬಿಜೆಪಿ ನಾಯಕರೊಂದಿಗೆ ಹೊಂದಾಣಿಗೆ ಪ್ರಕ್ರಿಯೆ ನಡೆದಿದ್ದು ರಾಜ್ಯದ ಪರ ಧ್ವನಿ ಎತ್ತುವ ಸಲುವಾಗಿ ಹೊಸ ಅಧ್ಯಾಯ ಆರಂಬವಾಗಿದೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ತಿಳಿಸಿದರು.

ಹಾಸನದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ವಿಧಾನಸಭಾ ಕಲಾಪ ರಾಜ್ಯಪಾಲರ ಭಾಷಣದ ಬಳಿಕ ಆರಂಭವಾಗಲಿದೆ, ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ವಿಷಯದಲ್ಲಿ ಅನ್ಯಾಯವಾಗುತ್ತಿದೆ ಎನ್ನುವ ರಾಜ್ಯ ಮತ್ತು ಕೇಂದ್ರಸರ್ಕಾರಗಳ ನಡುವೆ ನಡೆಯುತ್ತಿದ  ಈ ಬಾರಿ ಅಭಿವೃದ್ದಿಗಳ ವಿಚಾರವಾಗಿ ವಾಸ್ತಾವಾಂಶಗಳನ್ನು ಅಂಕಿ ಅಂಶಗಳ ಸಮೇತ ಚರ್ಚೆ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ,

ಇದನ್ನೂ ಓದಿ: ಪೊಲೀಸ್ ಪೇದೆಯನ್ನು ಮನಸೋ ಇಚ್ಚೆ ಥಳಿಸಿದ ಶಾಸಕಿಯ ಪುತ್ರ!

ಸೀಟ್​ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ, ನಮಗೆ ಬೇಕಾಗಿರುವುದು ಭ್ರಷ್ಟ ಕಾಂಗ್ರೆಸ್​ನ ರಾಜ್ಯದಿಂದ ತೆಗೆಯಬೇಕು, 28 ಕ್ಕೆ 28 ಸ್ಥಾನ ತರಬೇಕು, ದೇವಗೌಡ ನೇತೃತ್ವದಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು ಕಳೆದ 75 ವರ್ಷಗಳಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ಧ್ವನಿಯಾವುದೇ ನಮ್ಮ ಪಕ್ಷದ ಒಂದು ಬದ್ದತೆ. ಆದ್ದರಿಂದ ಈ ಬಾರಿ ಸೀಟು ಹಂಚಿಕೆ ವಿಚಾರ ಮುಖ್ಯವಲ್ಲಿ 28ಕ್ಕೆ 28 ಸ್ಥಾನ ಎನ್​ ಡಿಎ ಗೆಲ್ಲಬೇಕು ಎಂದು ಅವರು ಹೇಳಿದರು.

2019ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗಲು ನಿಖಿಲ್ ಕುಮಾರಸ್ವಾಮಿಯವರ ರಾಜಕೀಯ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ನಾಶಮಾಡಲೇಕು ಅಂತ ಹೇಳಿ, ಏನು ತಪ್ಪು ಮಾಡದೇ ಇರುವಂತ ಯುವಕ, ನಾವು ಯಾರಿಗೇ ಆಗಲೀ ವೈಯಕ್ತಿವಾಗಿ ತೊಂದರೇ ಕೊಟ್ಟು ಸೀಟ್​ ಬಡೆಯುವಂತದ್ದಿಲ್ಲ, ರಾಜಕಾರಣವು ನಿಂತ ನೀರಲ್ಲ, ನಮ್ಮ ಉದ್ದೇಶ ರಾಜ್ಯದಲ್ಲಿ 28ಕ್ಕೆ 28 ಸೀಟ್ ಗಳನ್ನು ಗೆಲ್ಲುವುದು ಮಾತ್ರ.

ಹಾಸನದಲ್ಲಿಯೂ ಕೂಡ ಈ ಹೊಂದಾಣಿಕೆಯಲ್ಲಿ ಈ ಬಾರಿ ಜೆಡಿಎಸ್​ ಗೆಲ್ಲಬೇಕು, ತಪ್ಪು ಮಾಡುವುದು ಸಹಜ ಆ ತಪ್ಪು ಅವಕಾಶ ಕೊಡಬೇಕು ಎಂದು ಹಾಸನದ ಜನತೆಯಲ್ಲಿ ಮನವಿ ಮಾಡಿಕೊಂಡರು.

RELATED ARTICLES

Related Articles

TRENDING ARTICLES