Friday, May 3, 2024

ಹೇಳಯ್ಯಾ.. ಆಪರೇಷನ್ ಅಂದ್ರೆ ಏನಯ್ಯಾ..? : ಸಿದ್ದರಾಮಯ್ಯ ಸಿಡಿಮಿಡಿ

ವಿಜಯಪುರ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪರೇಷನ್ ಕಮಲ ಕುರಿತು ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆಪರೇಷನ್ ಅಂದ್ರೆ ಏನು..? ಹೇಳು.. ಆಪರೇಷನ್ ಅಂದ್ರೆ ಏನಯ್ಯಾ..? ಅವರಿಗೆ ಆಪರೇಷನ್ ಬಿಟ್ರೆ ಬೇರೆ ಗೊತ್ತಿಲ್ಲ ಎಂದು ಗರಂ ಆದರು.

ಆಪರೇಷನ್ ಅಂದ್ರೆ ದುಡ್ಡು ಕೊಟ್ಟು ಕೊಂಡುಕೊಳ್ಳೋದು. ಅವರಿಗೆ ಜನರಲ್ಲಿ ವಿಶ್ವಾಸ ಗಳಿಸೋದು ಗೊತ್ತಿಲ್ಲಾ. ಅವರು ಈ ಹಿಂದೇನೂ ಎರಡು ಸಲಿ ಹಾಗೆ ಮಾಡಿದಾರೆ. ಪೂರ್ಣ ಪ್ರಮಾಣದಲ್ಲಿ ಇವರು ಗೆದ್ದೇ ಇಲ್ಲಾ. ಅವರು ಯಾವಾಗಲೂ ಮೆಜಾರಿಟಿಯಿಂದ ಗೆದ್ದಿಲ್ಲ. ಆದ್ರೆ, 2013, 2023 ರಲ್ಲಿ ನಾವು ಕಾಂಗ್ರೆಸ್ ನವರು ಗೆದ್ದಿದ್ದೇವೆ. ನಾವು ಜನಮತ ಪಡೆದು ಬರ್ತೆವೆ, ಅವರು ಆಪರೇಷನ್ ಮಾಡಿ ಬರ್ತಾರೆ ಎಂದು ಛೇಡಿಸಿದರು.

ಇವ್ರು ಭಾರತೀಯರಾ? ದೇಶ ಭಕ್ತರಾ?

ಮಂಡ್ಯದಲ್ಲಿ ಹನುಮನ್ ಧ್ವಜ ತೆರವು ಪ್ರಕರಣ ಸಿಬಿಐ ವಿಚಾರಣೆ ನಡೆಸಬೇಕೆಂಬ ಬಿಜೆಪಿ ಆಗ್ರಹದ ಬಗ್ಗೆ ಮಾತನಾಡಿ, ನಿಮಗೆ ಗೊತ್ತಾ ಅದು..? ಅವರು ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸ್ತೀನಿ ಅಂತ ಹೇಳಿ ಭಗವಾ ಧ್ವಜ ಹಾರಿಸ್ತಾರೆ. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಬದ್ದತೆ ಇಲ್ಲ. ರಾಷ್ಟ್ರಧ್ವಜ 143 ಕೋಟಿ ಜನರ ಅಸ್ಮಿತೆ ಅದು. ಅದಕ್ಕೆ ಅದನ್ನು ಹಾರಿಸಬೇಡಿ ಅಂತಾರೆ. ಇವರು ಯಾವ ಭಾರತೀಯರು? ಯಾವ ದೇಶ ಭಕ್ತರು? ಎಂದು ಗುಡುಗಿದರು.

RELATED ARTICLES

Related Articles

TRENDING ARTICLES