Monday, May 20, 2024

ಹನುಮಧ್ವಜ ಗಲಾಟೆ: ಶಾಸಕ ರವಿ ಗಣಿಗ ಸ್ಪಷ್ಟನೆ!

ಮಂಡ್ಯ: ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಜೈಶ್ರೀರಾಮ್ ಬರಹದ ಹನುಮಧ್ವಜ ಹಾರಿಸಿದ್ದು ಈ ಧ್ವಜವನ್ನು ತೆರವುಗೊಳಿಸಲು ಬಂದ ಅಧಿಕಾರಿಗಳ ವಿರುದ್ದ ಇಲ್ಲಗೆ ಸ್ಥಳೀಯರು ಹಾಗು ಹಿಂದು ಪರ ಸಂಘಟನೆಗಳು ಆಕ್ರೋಶ ಹೊರಹಾಕಿದರು, ಅಷ್ಟೆ ಅಲ್ಲದೇ ಇಲ್ಲಿಗೆ ಶಾಸಕರ ವಿರುದ್ದವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಹಂಪಿ ದೇಗುಲ: ಪ್ರವಾಸಿಗರಿಗೆ ವಸ್ತ್ರ ನೀತಿ ಸಂಹಿತೆ ಜಾರಿಗೆ ಜಿಲ್ಲಾಡಳಿತ ಸಿದ್ದತೆ!

ಮಂಡ್ಯದಲ್ಲಿ ರಾಜಕೀಯಕ್ಕೆ ಎಡೆ ಮಾಡಿ ಕೊಟ್ಟ ಹನುಮಧ್ವಜ ಗಲಾಟೆಗೆ ಶಾಸಕ ರವಿಕುಮಾರ್​ ಗಣಿಗ ಪ್ರತಿಕ್ರಿಯೆ ನೀಡಿ ಪವರ್​ ಟಿವಿ ಜೊತೆ ಮಾತನಾಡಿದ ಅವರು, ರಾಷ್ಟ್ರಧ್ವಜ ಮತ್ತು ನಾಡಧ್ವಜ ಅಳವಡಿಸಲು ಅನುಮತಿ ಕೇಳಿದ್ದರು. ಆದ್ರೆ ಇಲ್ಲಿ ಈ ಎರಡು ಧ್ವಜಗಳ ಬದಲಿಗೆ ಕೇಸರಿ ಧ್ವಜ ಹಾಕಿದ್ದಾರೆ. ಇದರಿಂದ ಜೆಡಿಎಸ್, ಬಿಜೆಪಿ ರಾಜಕೀಯ ಬಣ್ಣ ಕಟ್ಟಿಕೊಂಡಿದೆ.

ಇದರಿಂದ ಡಾ.ಬಿ.ಆರ್.ಅಂಬೇಡ್ಕರ್ ಧ್ವಜಕ್ಕೆ ಅನುಮತಿ ನೀಡಿ. ಕನಕ ಭಾವುಟಕ್ಕೆ ಅನುಮತಿ ಕೊಡಿ. ಕನ್ನಡ ಬಾವುಟಕ್ಕೆ ಅನುಮತಿ ನೀಡಿ ಅಂತ ಒತ್ತಡಗಳು ಬರುತ್ತಿವೆ. ಇದರಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES