Monday, May 13, 2024

ಮುಸ್ಲಿಮರು ನಿಮಗೆ ಆಸ್ತಿನಾ..? : ಆರ್. ಅಶೋಕ್

ಬೆಂಗಳೂರು : ರಾಮ ಏನು ಬಿಜೆಯವರ ಅಪ್ಪನ ಮನೆ ಆಸ್ತಿನಾ ಅಂತಾರೆ ಡಿ.ಕೆ. ಶಿವಕುಮಾರ್. ಹಾಗಿದ್ರೆ ಮುಸ್ಲಿಮರು ನಿಮಗೆ ಆಸ್ತಿನಾ..? ಎಂದು ಡಿಕೆಶಿಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮಗೆ ಮುಸ್ಲಿಮರು ಆಸ್ತಿ ಆದರೆ, ನಮಗೆ ರಾಮನೇ ಆಸ್ತಿ ಎಂದು ತಿರುಗೇಟು ನೀಡಿದ್ದಾರೆ

ಸಿಎಂ ಸಿದ್ದರಾಮ್ಯ ಅವರೇ, ನಿಮ್ಮ ಟಿಪ್ಪು ಸುಲ್ತಾನ್​ನನ್ನು ಎಲ್ಲಿ ಬಿಟ್ರಿ. ಈಗ ಟಿಪ್ಪುವಿನ ಎಲ್ಲಿ ಕೈ ಬಿಟ್ಟಿರಿ. ಟಿಪ್ಪು ಗೋವಿಂದ ಈಗ.. ಸಮುದ್ರದಲ್ಲಿ ಟಿಪ್ಪು ಬಿಟ್ರಾ..? ಟಿಪ್ಪು ಕಥೆ ಏನಾಗಬೇಕು. ಜೈ ಟಿಪ್ಪು ಸುಲ್ತಾನ್ ಎನ್ನುತ್ತಿದ್ದ ಸಿದ್ದರಾಮಯ್ಯ ಬಾಯಲ್ಲಿ ಜೈ ಶ್ರೀರಾಮ್ ಬಂದಿರೋದೆ ಆಶ್ಚರ್ಯ ಎಂದು ಸಿದ್ದರಾಮಯ್ಯರಿಗೆ ಲೇವಡಿ ಮಾಡಿದ್ದಾರೆ.

ಪಶ್ಚಿಮ ಬಂಗಾಳದಿಂದ ಕಾಂಗ್ರೆಸ್‌ ಗೆಟೌಟ್

ಇದೇ ವೇಳೆ ಬಿಜೆಪಿಯವರು ಅಯೋಗ್ಯರು ಎಂದ ಪ್ರಿಯಾಂಕ್ ಖರ್ಗೆಗೆ ಅಶೋಕ್ ಟಕ್ಕರ್ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಮತಾ ಬ್ಯಾನರ್ಜಿ ಅವರೇ ಉತ್ತರ ಕೊಟ್ಟಿದ್ದಾರೆ. ಮಮತಾ ಬ್ಯಾನರ್ಜಿಯವರು ಕಾಂಗ್ರೆಸ್‌ನವ್ರಿಗೆ ಯೋಗ್ಯತೆ ಇಲ್ಲ ಅಂದಿದ್ದಾರೆ. ಪಶ್ಚಿಮ ಬಂಗಾಳದಿಂದ ಕಾಂಗ್ರೆಸ್‌ನವ್ರನ್ನು ಗೆಟೌಟ್ ಅಂದಿದ್ದಾರೆ. ಇದೇ ಪ್ರಿಯಾಂಕ್ ಖರ್ಗೆಗೂ ಉತ್ತರ, ಶರದ್ ಪವಾರ್ ಅವರೂ ಗೆಟೌಟ್ ಅನ್ನೋದು ದೂರ ಇಲ್ಲ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES