Sunday, May 5, 2024

ಲೋಕಸಭಾ ಚುನಾವಣೆಗೆ ಅನಂತಕುಮಾರ್​ ಹೆಗ್ಡೆ ಅನರ್ಹರು: ಟಿಕೇಟ್ ನೀಡದಂತೆ ಮನವಿ!

ಬೆಳಗಾವಿ: ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ಹುದ್ದೆಗೆ ಯೋಗ್ಯರಲ್ಲ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡದಂತೆ ಪಕ್ಷದ ಹೈಕಮಾಂಡ್​ಗೆ ಬಿಜೆಪಿ ಹಿರಿಯ ಮುಖಂಡ ಜಯಂತ್ ತಿನಾಯ್ಕರ್ ಒತ್ತಾಯಿಸಿದ್ದಾರೆ.

ಹೆಗ್ಗಡೆ ತಮ್ಮ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ ಮತ್ತು ಬದಲಿಗೆ ಕೆಲವು ಅರ್ಹ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲು ಬೆಂಬಲಿಸಲು ತಿನಾಯ್ಕರ್ ಹೇಳಿದರು. ಆರು ಬಾರಿ ಆಯ್ಕೆಯಾಗಿದ್ದರೂ ಖಾನಾಪುರ ಅಥವಾ ಕಿತ್ತೂರು ತಾಲೂಕುಗಳಲ್ಲಿ ಮಾತ್ರವಲ್ಲದೆ ಇಡೀ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಲ್ಲಿ ಹೆಗ್ಗಡೆಯವರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಣ್ಣಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಶಿಕ್ಷಕಿ ಶವ ಪತ್ತೆ!

ಉತ್ತರ ಕನ್ನಡ ಸಂಸದರು ಇತ್ತೀಚೆಗೆ ಖಾನಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜನರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸಲಹೆ ನೀಡಿದ್ದರು. ಕಾರವಾರದ ತಮ್ಮ ನಿವಾಸದಲ್ಲಿ ಕೆಲ ವಿಚಾರಗಳ ಕುರಿತು ಚರ್ಚಿಸಲು ಕರೆದರೂ ಕೆಲವರನ್ನು ಭೇಟಿ ಮಾಡಿಲ್ಲ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಹೆಗ್ಡೆ ಅವರಿಗೆ ಟಿಕೆಟ್ ನೀಡಬೇಡಿ, ಬದಲಿಗೆ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಖಾನಾಪುರ ಮತ್ತು ಕಿತ್ತೂರಿನ ಜನತೆಗೆ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆಯುವಂತೆ  ಕರೆ ನೀಡಿದರು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಅರ್ಹ ಅಭ್ಯರ್ಥಿಯನ್ನು ಹೆಗ್ಡೆ ಅವರೇ ಆಯ್ಕೆ ಮಾಡಿ ಮತ್ತು ಅವರ ಗೆಲುವಿಗೆ ಸಹಾಯ ಮಾಡಲಿ. ಹಾಗೆ ಮಾಡಿದರೆ ಎರಡು ತಾಲೂಕುಗಳ ಎಲ್ಲ ಮತದಾರರ ಮೆಚ್ಚುಗೆಗೆ ಪಾತ್ರರಾಗುತ್ತಾರೆ’ ಎಂದು ತಿನಾಯ್ಕರ್ ಹೇಳಿದರು.

RELATED ARTICLES

Related Articles

TRENDING ARTICLES