Sunday, May 12, 2024

ರಾಮ ಮಂದಿರ ಉದ್ಘಾಟನೆಗೆ ಆಗಮಿಸಲಿರುವ ಗಣ್ಯರಿಗಾಗಿ ಕಾಯುತ್ತಿದೆ ವಿಶೇಷ ಉಡುಗೊರೆ!

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಲಿರುವ ಎಲ್ಲಾ ಮುಖ್ಯ ಅತಿಥಿಗಳಿಗೆ ವಿಶೇಷ ಉಡುಗೊರೆಗಳನ್ನು ನೀಡಲು ತಯಾರಿ ನಡೆಸಲಾಗಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದೇಶದ ಎಲ್ಲಾ ರಾಜ್ಯಗಳ ವಿವಿಧ ಗಣ್ಯರಿಗೆ ಶ್ರೀ ರಾಮಜನ್ಮಭೂಮಿ ತೀರ್ಥ ಟ್ರಸ್ಟ್​ ವತಿಯಿಂದ ಆಹ್ವಾನ ಪತ್ರಿಕೆಗಳನ್ನು ಕಳಿಸಲಾಗಿದೆ. ಅಂದು ಆಗಮಿಸುವ ಗಣ್ಯರಿಗೆ ಗುಜರಾತ್​ ಮೂಲದ ಟ್ರಸ್ಟ್​ ವತಿಯಿಂದ ವಿಶೇಷ ಉಡುಗೊರೆಗಳನ್ನು ತಯಾರಿಸಿದ್ದು ಗಣ್ಯರಿಗೆ ನೀಡಲು ಸಿದ್ದತೆ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: ಇಂದು ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ: ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ!

ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ, ದೇವಾಲಯದಲ್ಲಿ ಉದ್ಘಾಟನ ಪೂರ್ವ ಸಿದ್ದತಾ  ಕಾರ್ಯಗಳು ಬರದಿಂದ ಬಾಗಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲಿರುವ 2200 ಗಣ್ಯಾತಿ ಗಣ್ಯರಿಗೆ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ.

ಈ ಉಡುಗೊರೆ ಪೆಟ್ಟಿಗೆಯಲ್ಲಿ ರಾಮಜನ್ಮ ಭೂಮಿಯ ಪವಿತ್ರ ಮಣ್ಣು, ಸರಯೂ ನದಿಯ ನೀರು, ಸಾಲಿಗ್ರಾಮ, ರಾಮನ ಬಿಲ್ಲು ಒಳಗೊಂಡಂತೆ ಒಂದು ಬೆಳ್ಳಿ ಕಾಯಿನ್​ ಇರಲಿದೆ. ದೇವಾಲಯಕ್ಕೆ ಆಗಮಿಸುವ ಗಣ್ಯರು ಈ ಉಡುಗೊರೆಯನ್ನು ಪಡೆದುಕೊಳ್ಳಲಿದ್ದಾರೆ ಉಳಿದಂತೆ ಗಣ್ಯರ ಮನೆ ಮತ್ತು ಪೋಸ್ಟ್​ ಮೂಲಕ ಉಡುಗೊರೆ ರವಾನೆ ಮಾಡಲಾಗುತ್ತದೆ.

RELATED ARTICLES

Related Articles

TRENDING ARTICLES