Saturday, May 11, 2024

ರಾಮ ಮಂದಿರ ಉದ್ಘಾಟನೆಗೆ ಸಿಎಂ ಗೆ ಆಹ್ವಾನ ಇಲ್ಲ, ಡಿಸಿಎಂ ಗೆ ಎಲ್ಲಿಂದ ಕೊಡೋದು: ಆರ್​.ಅಶೋಕ್​

ಮಂಗಳೂರು: ನಾನು ಹಿಂದು, ರಾಮ ಭಕ್ತ, ಪ್ರಾಣ ಪ್ರತಿಷ್ಠೆಗೆ ಆಹ್ವಾನ ನೀಡಿಲ್ಲ ಎಂಬ ಡಿಸಿಎಂ ಡಿ.ಕೆ.ಶಿಕುಮಾರ್​​ ಹೇಳಿಕೆ ವಿಚಾರಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಯಾರು ಪ್ರಾಣ ಪ್ರತಿಷ್ಠೆಗೆ ಹೋಗಬೇಕು ಎನ್ನುವುದು ತೀರ್ಮಾನವಾಗಿ ಆಹ್ವಾನ ಪತ್ರಿಕೆ ನೀಡಲಾಗಿದೆ. ಉತ್ತರ ಪ್ರದೇಶದ ಸಿಎಂ, ರಾಜ್ಯಪಾಲರು ಅಲ್ಲಿಗೆ ಸಂಬಂಧಪಟ್ಟವರಿಗೆ ಆಹ್ವಾನ ನೀಡಲಾಗಿದೆ. ಬೇರೆ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಟ್ಟಿಲ್ಲ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ರಾಮಮಂದಿರ ಲೋಕಾರ್ಪಣೆ: ದೆಹಲಿಯಾದ್ಯಂತ ದೇಗುಲಗಳಲ್ಲಿ ನೇರಪ್ರಸಾರ

ಇನ್ನು ರಾಜ್ಯದ ಮುಖ್ಯಮಂತ್ರಿಗೆ ಆಹ್ವಾನ ಕೊಡಲಿಲ್ಲ ಎಂದ ಮೇಲೆ ಉಪ ಮುಖ್ಯಮಂತ್ರಿಗೆ ಕೊಡುವುದು ಎಲ್ಲಿಂದ ಬಂತು. ಉಪ ಮುಖ್ಯಮಂತ್ರಿಗೆ ಕೊಡುವ ಪ್ರಶ್ನೆಯೇ ಬರುವುದಿಲ್ಲ. ಯಾರಿಗೆ ಆಹ್ವಾನ ನೀಡಿದೆ, ಅವರು ಹೋಗ್ತಾರೆ ಎಂದರು.

RELATED ARTICLES

Related Articles

TRENDING ARTICLES