Friday, May 10, 2024

ನಾನು ರಾಜ್​ಕುಮಾರ್ ಕಾಲು ಧೂಳಿಗೂ ಸಮ ಅಲ್ಲ : ನಟ ದರ್ಶನ್

ಬೆಂಗಳೂರು : ಡಾ.ರಾಜ್​ಕುಮಾರ್ ಸರ್ ಅವರ ಹೆಸರು ಹೇಳೋಕೆ ಅಲ್ಲ.. ಅವರ ಕಾಲು ಧೂಳಿಗೂ ನಾನು ಸಮ ಅಲ್ಲ ಎಂದು ನಟ ದರ್ಶನ್ ಹೇಳಿದರು.

ಕಾಟೇರ ಸಕ್ಸಸ್ ಸಂಭ್ರಮದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ದರ್ಶನ್ ಉತ್ತರ ಹೀಗಿತ್ತು. ಕಾಟೇರ ಚಿತ್ರದಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯ ಕಶ್ಯಪು ಡೈಲಾಗ್ ಬರುತ್ತೆ. ಆ ಡೈಲಾಗ್ ಬಳಿಕ ‘ನಿಮ್ಮ ಅಪ್ಪನ ಹೆಸರು ಉಳಿಸಿಬಿಟ್ಟೆ ಕಣಯ್ಯಾ’ ಅಂತ ಕುಮಾರ್ ಗೋವಿಂದ್ ಹೇಳುತ್ತಾರೆ.

ನಿಮ್ಮ ಅಭಿನಯ ನೋಡಿದ ಮೇಲೆ ನಿಮ್ಮ ಸೆಲೆಬ್ರೆಟೀಸ್ ಡಾ. ರಾಜ್ ಬಿಟ್ಟರೆ ಈ ರೀತಿ ಪೌರಾಣಿಕ ಪಾತ್ರ ಡಿ ಬಾಸ್ ಮಾತ್ರ ಮಾಡಲು ಸಾಧ್ಯ ಎನ್ನುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಅವರು, ಡಾ.ರಾಜ್​ಕುಮಾರ್ ಸರ್ ಅವರ ಹೆಸರು ಹೇಳೋಕೆ ಅಲ್ಲ.. ಅವರ ಕಾಲು ಧೂಳಿಗೂ ನಾನು ಸಮ ಅಲ್ಲ. ಆದರೆ, ಪ್ರಯತ್ನ ಮಾಡಬಹುದು. ಅವರು ಮಾಡಿರುವ ಪಾತ್ರದಲ್ಲಿ 5 ಪರ್ಸೆಂಟ್ ಅಲ್ಲ, 0.1 ಪರ್ಸೆಂಟ್  ಕೂಡ ನಮಗೆ ಮಾಡಲು ಆಗಲ್ಲ. ರಾಜಕುಮಾರ ಸರ್ ಜೊತೆ ನಮ್ಮನ್ನ ಕಂಪೇರ್ ಮಾಡಬೇಡಿ ಎಂದು ಮನವಿ ಮಾಡಿದರು.

ಗಂಡಸು ಬೆವರು ಸುರಿಸಬೇಕು

ಯಾರು ದೊಡ್ಡವರಲ್ಲ, ಸಿನಿಮಾ ದೊಡ್ಡದು. ‘ಕಾಟೇರ’ ಚಿತ್ರದ ಕಥೆ ಕೇಳುವಾಗ ಚಂದಮಾಮನ ಕಥೆ ರೀತಿ ಕೇಳಿದ್ದೆ. ಚಿತ್ರದಲ್ಲಿ ಒಳ್ಳೆಯ ಸಂದೇಶ ಇದೆ. ಇವತ್ತು ಜನ ಮಾತನಾಡೋದೇನು? ಗಂಡಸು ಬೆವರು ಸುರಿಸಬೇಕು, ಜೊಲ್ಲು ಸುರಿಸಬಾರದು ಅಂತ. ಈ ಡೈಲಾಗ್​ನಲ್ಲಿ ಎಷ್ಟು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಕಾಟೇರ ಎಂದು ಹೇಳಿದರು.

RELATED ARTICLES

Related Articles

TRENDING ARTICLES