Saturday, May 18, 2024

ನಿಮ್ಮನ್ನು ಜನ ಸುಳ್ಳುರಾಮಯ್ಯ ಎನ್ನುತ್ತಾರೆ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿ ಇರ್ತಾರೆ ಗೊತ್ತಿಲ್ಲ. ಸಿಎಂ ಹಾಗೂ ಡಿಸಿಎಂ ಸೇರಿ ಕರ್ನಾಟಕವನ್ನು ಲೂಟಿ ಮಾಡ್ತಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರಕ್ಕೆ ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕಾಂಗ್ರೆಸ್​ ಉಚಿತ ಗ್ಯಾರಂಟಿಗಳ ವಿರೋಧಿಗಳಲ್ಲ. ಆದರೆ, ಗ್ಯಾರಂಟಿ ಕೊಡುವಾಗ ಖಜಾನೆಯಲ್ಲಿ ಹಣ ಇದೆಯೋ? ಇಲ್ಲವೋ? ಎನ್ನುವುದನ್ನು ನೋಡಬೇಕಿತ್ತು. ರಾಜ್ಯ ಸರ್ಕಾರ ದಿವಾಳಿ ಆಗಿದೆ ಎಂದು ಕುಟುಕಿದ್ದಾರೆ.

ರಾಜ್ಯದಲ್ಲಿ ಬರ ಇದೆ, ಇದನ್ನು ಸರ್ಕಾರ ಗಮನಿಸುತ್ತಿಲ್ಲ ಎಂದು ಪ್ರಧಾನಿ ಮೋದಿಯವರು ಎಚ್ಚರಿಕೆ ರೂಪದಲ್ಲಿ ಹೇಳಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಹೇಳ್ತಾರೆ, ಮೋದಿ ಪುರಾವೆ ಇಟ್ಕೊಂಡು ಹೇಳಬೇಕಿತ್ತು ಎನ್ನುತ್ತಾರೆ. ಸಿದ್ದರಾಮಯ್ಯ ದಿನ ಸುಳ್ಳು ಹೇಳಿ ಹೇಳಿ, ನಿಮ್ಮನ್ನು ಜನ ಸುಳ್ಳುರಾಮಯ್ಯ ಎನ್ನುತ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಸಿದ್ದರಾಮಯ್ಯ ಕಾಲದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ : ಮಾಜಿ ಸಚಿವ ಬಿ.ಸಿ. ಪಾಟೀಲ್

ದರಿದ್ರ ಹೊತ್ತಿಕೊಂಡು ಬಂದಿದ್ದೀರಿ

ನಿಮಗೆ ರೈತರಿಗೆ ಐದು ತಾಸು ವಿದ್ಯುತ್ ಕೊಡೋಕೆ ಆಗ್ತಾ ಇಲ್ಲ. ನೀವು ಸರ್ಕಾರ ತರುವಾಗಲೇ ದರಿದ್ರ ಹೊತ್ತಿಕೊಂಡು ಬಂದಿದ್ದೀರಿ. ನಿಮ್ಮ ಸ್ಥಾನಕ್ಕೆ ನಾವು ಬೆಲೆ ಕೊಡ್ತೇವೆ. ಸಿದ್ದರಾಮಯ್ಯ ಎನ್ನುವ ಕಾರಣಕ್ಕೆ ಅಲ್ಲ, ಸಿಎಂ ಎನ್ನುವ ಸ್ಥಾನಕ್ಕೆ ಗೌರವ ನೀಡುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES