Sunday, May 19, 2024

ಟ್ರಾಕ್ಟರ್​ಗೆ ಹಿಂಬದಿಯಿಂದ ಲಾರಿ ಡಿಕ್ಕಿ: ಓರ್ವ ಸಾವು

ಚಿತ್ರದುರ್ಗ: ಟ್ರಾಕ್ಟರ್​​ಗೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿದ್ದು, ಓರ್ವ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ K.R.ಹಳ್ಳಿ ಗೇಟ್ ಬಳಿ ನಡೆದಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್‌ ಪತ್ತೆ..!

ಕೂಲಿ ಕಾರ್ಮಿಕ ಮಂಜಣ್ಣ ಮೃತ ದುರ್ದೈವಿ. ಮೃತ ಮಂಜಣ್ಣ ತುಮಕೂರು ಜಿಲ್ಲೆಯ ಶಿರಾ ಮೂಲದ ನಿವಾಸಿ. ಕೂಲಿ ಕಾರ್ಮಿಕರು ಅಡಿಕೆ ಕೊಯ್ಯಲು ಹಿರಿಯೂರಿಗೆ ಬರುತ್ತಿದ್ರು. ಈ ವೇಳೆ ಅವಘಡ ಸಂಭವಿಸಿದೆ. ಟ್ರಾಕ್ಟರ್​ನಲ್ಲಿದ್ದ 9 ಮಂದಿ ಪೈಕಿ ಒರ್ವ ಸಾವನಪ್ಪಿದ್ದು, 8 ಮಂದಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES