Wednesday, May 8, 2024

ಅಕ್ರಮವಾಗಿ ಕಸಾಯಿಖಾನೆಗೆ ರಾಸುಗಳ ಸಾಗಿಸುತ್ತಿದ್ದ ವಾಹನ ಪಲ್ಟಿ!

ಚಾಮರಾಜನಗರ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿದ್ದು ಒಂದು ಹಸು ಸ್ಥಳದಲ್ಲೆ ಸಾವಿಗೀಡಾಗಿರುವ ಘಟನೆ ನಗರದ ಪುಣ್ಯದ ಹುಂಡಿ ಬಳಿ ನಡೆದಿದೆ.

ಮೈಸೂರಿನಿಂದ ಕೇರಳಕ್ಕೆ ಅಕ್ರಮವಾಗಿ ರಾಸುಗಳನ್ನು ಸಾಗಿಸುತ್ತಿದ್ದ ವೇಳೆ ಬೆಳಗಿನ ಜಾವ ಸುಮಾರು 6 ಗಂಟೆಗೆ ಚಾಮರಾಜಗರ ತಾಲೂಕಿನ ಪುಣ್ಯದಹುಂಡಿ ಗ್ರಾಮದ ಬಳಿ ಟಾಟಾ ಏಸ್​ ಗಾಡಿಯಲ್ಲಿ ಸಾಗಿಸುತ್ತಿದ್ದ ರಾಸುಗಳು ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ: ಈ ಹಿಂದೆ ಸಂಕಲ್ಪ ಮಾಡಿದಂತೆ ವಿಶೇಷ ಪೂಜೆ ನೆರವೇರಿಸಿದ್ದೇವೆ : ಹೆಚ್.ಡಿ ದೇವೇಗೌಡ

ಟಾಟಾ ಏಸ್​ನಲ್ಲಿ ಎರಡು ಎಮ್ಮೆ ಹಾಗು ಎಂಟು ಹಸುಗಳನ್ನು ಸಾಗಿಸಲಾಗಿತ್ತು, ಘಟನೆಯಿಂದ ಒಂದು ಹಸು ಸ್ಥಳದಲ್ಲೇ ಸಾವಿಗೀಡಾಗಿದ್ದು ಎಂಟಕ್ಕು ಹೆಚ್ಚು ಜಾನುವಾರುಗಳು ಗಾಯಗೊಂಡಿವೆ. ಅಪಘಾತ ಸಂಭವಿಸುತ್ತಿದ್ದಂತೆ ಟಾಟಾ ಏಸ್​ ಚಾಲಕ ಮತ್ತು ಕ್ಲೀನರ್​ ಸ್ಥಳದಿಂದ ಕಾಲ್ಕಿದ್ದಾರೆ.

ಘಟನೆಯಿಂದ ಬದುಕುಳಿದ ಜಾನುವಾರುಗಳನ್ನ ಚಾಮರಾಜ ನಗರ ಗ್ರಾಮಾಂತರ ಪೊಲೀಸರು ಸುಪರ್ದಿಗೆ ಪಡೆದಿದ್ದು ಸ್ಥಳ ಮಹಜರು ನಡೆಸಿದ್ದಾರೆ.

RELATED ARTICLES

Related Articles

TRENDING ARTICLES