ಚಾಮರಾಜನಗರ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾಗಿದ್ದು ಒಂದು ಹಸು ಸ್ಥಳದಲ್ಲೆ ಸಾವಿಗೀಡಾಗಿರುವ ಘಟನೆ ನಗರದ ಪುಣ್ಯದ ಹುಂಡಿ ಬಳಿ ನಡೆದಿದೆ.
ಮೈಸೂರಿನಿಂದ ಕೇರಳಕ್ಕೆ ಅಕ್ರಮವಾಗಿ ರಾಸುಗಳನ್ನು ಸಾಗಿಸುತ್ತಿದ್ದ ವೇಳೆ ಬೆಳಗಿನ ಜಾವ ಸುಮಾರು 6 ಗಂಟೆಗೆ ಚಾಮರಾಜಗರ ತಾಲೂಕಿನ ಪುಣ್ಯದಹುಂಡಿ ಗ್ರಾಮದ ಬಳಿ ಟಾಟಾ ಏಸ್ ಗಾಡಿಯಲ್ಲಿ ಸಾಗಿಸುತ್ತಿದ್ದ ರಾಸುಗಳು ಅಪಘಾತಕ್ಕೀಡಾಗಿದೆ.
ಇದನ್ನೂ ಓದಿ: ಈ ಹಿಂದೆ ಸಂಕಲ್ಪ ಮಾಡಿದಂತೆ ವಿಶೇಷ ಪೂಜೆ ನೆರವೇರಿಸಿದ್ದೇವೆ : ಹೆಚ್.ಡಿ ದೇವೇಗೌಡ
ಟಾಟಾ ಏಸ್ನಲ್ಲಿ ಎರಡು ಎಮ್ಮೆ ಹಾಗು ಎಂಟು ಹಸುಗಳನ್ನು ಸಾಗಿಸಲಾಗಿತ್ತು, ಘಟನೆಯಿಂದ ಒಂದು ಹಸು ಸ್ಥಳದಲ್ಲೇ ಸಾವಿಗೀಡಾಗಿದ್ದು ಎಂಟಕ್ಕು ಹೆಚ್ಚು ಜಾನುವಾರುಗಳು ಗಾಯಗೊಂಡಿವೆ. ಅಪಘಾತ ಸಂಭವಿಸುತ್ತಿದ್ದಂತೆ ಟಾಟಾ ಏಸ್ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಕಾಲ್ಕಿದ್ದಾರೆ.
ಘಟನೆಯಿಂದ ಬದುಕುಳಿದ ಜಾನುವಾರುಗಳನ್ನ ಚಾಮರಾಜ ನಗರ ಗ್ರಾಮಾಂತರ ಪೊಲೀಸರು ಸುಪರ್ದಿಗೆ ಪಡೆದಿದ್ದು ಸ್ಥಳ ಮಹಜರು ನಡೆಸಿದ್ದಾರೆ.