Friday, May 17, 2024

ರೈತರಿಗೆ ಅನ್ಯಾಯ.. ವಿಷದ ಬಾಟಲ್ ಹಿಡಿದು ಅನ್ನದಾತರ ಪ್ರತಿಭಟನೆ

ತುಮಕೂರು : ಅಡಿಕೆ ತುಂಬಿದ ಲಾರಿಯನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳ ತಂಡ ಸೀಜ್ ಮಾಡಿ, 44 ಲಕ್ಷ ರೂ. ದಂಡ ವಿಧಿಸಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ.

ಇದನ್ನು ವಿರೋಧಿಸಿ ರೈತರು ವಾಣಿಜ್ಯ ತೆರಿಗೆ ಕಚೇರಿ ಮುಂದೆ ಧರಣಿ ಮಾಡಿದ್ದಾರೆ. ಅಡಿಕೆ ತುಂಬಿದ ಲಾರಿ ಬಿಡದಿದ್ರೆ ವಿಷ ಕುಡಿಯುತ್ತೇವೆ ಎಂದು ವಿಷದ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ರೈತರ ಅಡಿಕೆ ತುಂಬಿದ ಲಾರಿ ಗುಬ್ಬಿಯಿಂದ ಶಿವಮೊಗ್ಗಕ್ಕೆ ಹೋಗುತ್ತಿತ್ತು. ತಿಪಟೂರು ವಾಣಿಜ್ಯ ತೆರಿಗೆ ಅಧಿಕಾರಿಗಳು ಲಾರಿಗೆ ದಂಡ ವಿಧಿಸಿದ್ದಾರೆ. ತಿಪಟೂರು ಗ್ರಾಮಾಂತರ ಠಾಣೆಯಲ್ಲಿ 15 ದಿನಗಳಿಂದ ಅಡಿಕೆ ತುಂಬಿದ ಲಾರಿ ನಿಂತಿದೆ. ದಂಡ ವಜಾ ಮಾಡಿ ಲಾರಿ ಬಿಡುವಂತೆ ರೈತರು ಹೋರಾಟ ನಡೆಸಿದ್ದಾರೆ. ವಿಷದ ಬಾಟೆಲ್​ ಅ​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES