Sunday, May 12, 2024

ನಮ್ಮ ಮನೆಯ ಸೆಕ್ಯೂರಿಟಿ ನಮ್ಮ ಮನೆಯ ನೀರನ್ನು ಪಕ್ಕದ ಮನೆಗೆ ನೀಡ್ತಾ ಇದಾನೆ ; ನಟ ಉಪೇಂದ್ರ

ಬೆಂಗಳೂರು : ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ಅಖಂಡ ಕರ್ನಾಟಕ ಬಂದ್​ಗೆ ಇಂದು ಕನ್ನಡ ಚಿತ್ರರಂಗ ಸಂಪೂರ್ಣ ಸಾತ್​ ನೀಡಿದ್ದು ಕನ್ನಡದ ಕಲಾವಿದರು ನಗರದ ಗುರುರಾಜ ಕಲ್ಯಾಣ ಮಂಟಪ ಬಳಿ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ವೇಳೆ ನಟ ರಿಯಲ್​ ಸ್ಟಾರ್ ಉಪೇಂದ್ರ ಕಾವೇರಿ ವಿಚಾರವಾಗಿ ಮಾತನಾಡಿ, ನಮ್ಮ ಮನೆಯ ನೀರನ್ನು ನಮ್ಮ ಮನೆಯ ಸೆಕ್ಯೂರಿಟಿ ನಮ್ಮ ಪಕ್ಕದ ಮನೆಗೆ ನೀಡಲು ಹೋಗುತ್ತಿದ್ದಾನೆ ಇದರ ವಿರುದ್ದವಾಗಿ ನಾನು ನಮ್ಮ ಮನೆಯ ಮುಂದೆಯೇ ಕುಳಿತು ಪ್ರತಿಭಟನೆ ಮಾಡಬೇಕು ಅನ್ಕೊಂಡಿದ್ದೇನೆ ಎನ್ನುವ ಮೂಲಕ ರಾಜ್ಯ ಸರ್ಕಾರದ ವಿರುದ್ದ ಮಾರ್ಮಿಕವಾಗಿ ಮಾತನಾಡಿ ಆಕ್ರೋಶ ಹೊರಹಾಕಿದರು.

ಬಳಿಕ ಮಾತನಾಡಿದ ಹಿರಿಯ ನಟಿ ಉಮಾಶ್ರಿ, ಕಾವೇರಿ ನೀರನ್ನು ಕೇವಲ ಕನ್ನಡಿಗರು ಮಾತ್ರ ಕುಡಿಯುತ್ತಿಲ್ಲ, ಎಲ್ಲಾ ಜಾತಿ ಧರ್ಮದ ಜನತೆ ಸೇವಿಸುತ್ತಿದ್ದಾರೆ, ಕಾವೇರಿ ನೀರು ನಮ್ಮ ಜನರಿಗೆ ಸಾಕಾಗುತ್ತಿಲ್ಲ ಎಂದಾಗ ಹೆಚ್ಚಿನ ನೀರನ್ನು ಬೇರೆಯವರಿಗೆ ನೀಡಿವುದಾದರು ಹೇಗೆ ಎಂದು ಪ್ರಶ್ನಿಸಿದರು.  ಆದ್ದರಿಂದ ಕವೇರಿ ನೀರು ಹಂಚಿಕೆ ವಿಚಾರವಾಗಿ ನಾವು ಇಂದು ಪ್ರತಿಭಟನೆ ನಡೆಸಲು ಎಲ್ಲಾ ಕಲಾವಿದರು ಒಂದಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ಬಂದ್​ ಗೆ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​, ರಿಯಲ್​ ಸ್ಟಾರ್​ ಉಪೇಂದ್ರ, ಹಿರಿಯ ನಟ ಶ್ರೀನಾಥ್​, ಉಮಾಶ್ರೀ, ವಿನೋದ್​ ಪ್ರಭಾಕರ್​​, ಪೂಜಾಗಾಂಧಿ, ಶ್ರೀನಿವಾಸ್​ ಮೂರ್ತಿ, ಶ್ರೀನಗರ ಕಿಟ್ಟಿ, ವಿಜಯ್​ ರಾಘವೇಂದ್ರ, ಶ್ರೀಮುರಳಿ, ನವೀನ್​ ಕೃಷ್ಣ, ಕೀರ್ತೀ ಧರ್ಮಾರಾಜ್​, ಪ್ರಮೀಳಾ ಜೋಸಾಯಿ, ನಿರ್ದೇಶಕ, ನಿರ್ಮಾಪಕರು ಸೇರಿ ಕಾವೇರಿ ಹೋರಾಟಕ್ಕೆ ಸಾಥ್​ ನೀಡಿದ್ದಾರೆ.

RELATED ARTICLES

Related Articles

TRENDING ARTICLES