Friday, May 17, 2024

ಕರ್ನಾಟಕ ಬಂದ್​ ಗೆ ಅನುಮತಿ ಇಲ್ಲ: ಪೊಲೀಸ್​ ಕಮಿಷನರ್ ದಯಾನಂದ್​ ವಾರ್ನಿಂಗ್​!​

ಬೆಂಗಳೂರು : ನಾಳೆ ಕೆಲವು ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಕರ್ನಾಟಕ ಬಂದ್​ ಗೆ ಕರೆ ನೀಡಿದ್ದಾರೆ. ಈ ಬಂದ್​ ಗೆ ಬೆಂಗಳೂರು ನಗರದಲ್ಲಿ ಯಾವುದೇ ರ್ಯಾಲಿ ಹಾಗು ಪ್ರತಿಭಟನೆಗಳಿಗೆ ಅವಕಾಶ ಇಲ್ಲ ಎಂದು ಬೆಂಗಳೂರು ಪೊಲೀಸ್​ ಆಯುಕ್ತರಾದ ದಯಾನಂದ್​ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಇಂದು ಮಧ್ಯರಾತ್ರಿ 12 ರಿಂದ 29ರ ರಾತ್ರಿ ಮಧ್ಯರಾತ್ರಿ ವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ನಗರದ ಫ್ರೀಡಂ ಪಾರ್ಕ್​ ನಲ್ಲಿ ಪ್ರತಿಭಟನೆ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರ ಕುರಿತು ಎಲ್ಲಾ ಸಂಘಟನೆಗಳಿಗೂ ಮಾಹಿತಿ ನೀಡಿದ್ದು ನೋಟೀಸ್​ ಕೂಡ ಕಳಿಸಲಾಗಿದೆ ಎಂದರು.

ಇದನ್ನೂ ಓದಿ: ನಿತ್ಯ ಮೆನನ್ ವಿರುದ್ದ ಸುಳ್ಳು ಸುದ್ದಿ ಪೋಸ್ಟ್​ : ನಿತ್ಯ ಗರಂ!

ಬಂದ್ ಆಚರಣೆ ಕುರಿತು ಈಗಾಗಲೇ ಸರ್ವೋಚ್ಚ ನ್ಯಾಯಾಲಯವು 1997 ರಲ್ಲೇ ಸಾರ್ವಜನಿಕ ಜೀವನವನ್ನು ಅಸ್ಥವ್ಯಸ್ಥಗೊಳಿಸುವ ಬಂದ್​ ಕಾನೂನು ಬಾಹಿರ ಎಂದು ಹೇಳಿದೆ. ಇದರ ಆದಾರದಲ್ಲಿ ನಾಳೆ ನಡೆಯಲಿರುವ ಬಂದ್​ಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ನಾಳೆ ನಡೆಯಲಿರುವ ಕರ್ನಾಟಕ ಬಂದ್​ ವೇಳೆ ಅಂಗಡಿ ಮಾಲೀಕರು ತಾವೇಗಿಯೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರೇ ತೊಂದರೆ ಇಲ್ಲ. ಆದರೇ, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಂಡು ಪ್ರಕರಣ ದಾಖಲಾಗಿಸುವುದು ಎಂದು ಅವರು ಹೇಳಿದ್ದಾರೆ.

ಪೊಲೀಸ್​ ಬಿಗಿ ಬಂದೋಬಸ್ತ್​: 

ಕರ್ನಾಟಕ ಬಂದ್​ ಹಿನ್ನೆಲೆ ನಾಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಎಸ್​ಆರ್​ಪಿ, ಸಿಆರ್​ಪಿ ತುಕಡಿಗಳು ಮತ್ತು ಹೋಂಗಾರ್ಡ್​ಗಳನ್ನು ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಮಾಡಲು ಸೂಚನೆ ನೀಡಲಾಗಿದೆ ಎಂದರು.

RELATED ARTICLES

Related Articles

TRENDING ARTICLES