Thursday, May 2, 2024

ಅಕೌಂಟ್​ ಹ್ಯಾಕ್​ ಮಾಡಿ 40 ಲಕ್ಷ ರೂ. ವಂಚಸಿ ಆರೋಪಿ ಎಸ್ಕೇಪ್​ !

ಮೈಸೂರು: ಬಸವಮಾರ್ಗ ಫೌಂಡೇಶನ್​​ ಬ್ಯಾಂಕ್​ ಅಕೌಂಟ್​​ ಹ್ಯಾಕ್​ ಮಾಡಿ, 40 ಲಕ್ಷ ರೂ. ವಂಚನೆ ಮಾಡಿ ಆರೋಪಿ ಪರಾರಿಯಾಗಿರುವ ಘಟನೆ ಹೆಬ್ಬಾಳು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಡ್ಯ ಮೂಲದ ವಿಶಾಲ್ ರಾಜ್ ವಂಚನೆ ಮಾಡಿದ ಆರೋಪಿ. ಬಸವಮಾರ್ಗ ಫೌಂಡೇಶನ್ ವ್ಯಸನ ಮುಕ್ತವಾಗಿಸುವ ಕೇಂದ್ರವಾಗಿದೆ. ಈ ಕೇಂದ್ರಕ್ಕೆ 2022ರ ಆಗಸ್ಟ್​ನಲ್ಲಿ ವ್ಯಸನ ಮುಕ್ತನಾಗಲು ವಿಶಾಲ್ ರಾಜ್ ಬಂದಿದ್ದನು.

ಇದನ್ನೂ ಓದಿ: ಜೈಲಿನಿಂದ ಪುನೀತ್​ ಕೆರೆಹಳ್ಳಿ ಬಿಡುಗಡೆ!

ವ್ಯಸನ ಮುಕ್ತನಾದ ಬಳಿಕ ವಿಶಾಲ್ ರಾಜ್ ಇಲ್ಲಿಯೇ ಕೆಲಸ ಕೊಡಿ ಎಂದು ಫೌಂಡೇಶನ್​​ ಮಾಲೀಕರ ಬಳಿ ಕೇಳಿಕೊಂಡಿದ್ದನು. ಇದೇ ವೇಳೆ ಫೌಂಡೇಶನ್​​​ನ ಅಕೌಂಟೆಂಟ್​​ ಕೆಲಸ ಬಿಟ್ಟಿದ್ದನು. ಈ ಜಾಗಕ್ಕೆ ವಿಶಾಲ್ ರಾಜ್​​ನನ್ನು ನೇಮಕ ಮಾಡಿಕೊಳ್ಳಲಾಯಿತು. ಬಳಿಕ ವಿಶಾಲ್​ ರಾಜ್​ ಹಳೆ ಅಕೌಂಟ್ ಗೋಕುಲ್ ರಾಜ್​​ನಿಂದ ನೆರವು ಪಡೆದು 2022ರ ಜೂನ್ 17 ರಿಂದ ‌ಜುಲೈ 24 ರ ವರೆಗೆ 37.90 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ.

ಕೆಲ ದಿನಗಳ ನಂತರ ಫೌಂಡೇಶನ್​ ಮಾಲೀಕರಿಗೆ ಅನುಮಾನ ಬಂದು ಅಕೌಂಟ್ ಪರಿಶೀಲಿಸಿದ ವೇಳೆ ವಂಚನೆ ಬೆಳಕಿಗೆ ಬಂದಿದೆ. ಟ್ರಸ್ಟಿ ಬಸವರಾಜ್ ಹೆಬ್ಬಾಳು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ವಿಶಾಲ್ ರಾಜ್ ಎಸ್ಕೇಪ್‌ ಆಗಿದ್ದಾನೆ.

RELATED ARTICLES

Related Articles

TRENDING ARTICLES