Wednesday, September 17, 2025
HomeUncategorizedನನ್ನ ಕಣ್ಣಲ್ಲೂ ಸ್ಮಾರ್ಟ್ ಕಾಣುತ್ತಿಲ್ಲ ; ಸಚಿವ ಮಧು ಬಂಗಾರಪ್ಪ

ನನ್ನ ಕಣ್ಣಲ್ಲೂ ಸ್ಮಾರ್ಟ್ ಕಾಣುತ್ತಿಲ್ಲ ; ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಸ್ಮಾರ್ಟ್​ ಸಿಟಿ ಕಾಮಗಾರಿಯಲ್ಲಿ ನಾಗರಿಕರ ಅಸಮಾಧಾನದ ಹಿನ್ನೆಲೆ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಸ್ಮಾರ್ಟ್​ ಸಿಟಿ, ನೀರಾವರಿ ಹಾಗೂ ಪ್ರವಾಸೋದ್ಯಮ ಇಲಾಖಗಳ ಪರಿಶೀಲನೆ ನಡೆಸಲಾಗಿದೆ. ಮುದ್ದಣ್ಣ ಕೆರೆಯ ಮರಳು ಸಾಗಾಟದಲ್ಲಿ ಲೋಪ ಆಗಿರುವುದು ಕಂಡುಬಂದಿದೆ, ಬೆಂಗಳೂರು ಮಟ್ಟದಲ್ಲಿ ಅದರ ಬಗ್ಗೆ ಸೂಕ್ರ ಕ್ರಮ ಆಗಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : ‘ನಂದಿ ಫಿಲ್ಮಂ ಅವಾರ್ಡ್’.. ಲೋಗೋ ಲಾಂಚ್ ಮಾಡಿ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಇನ್ನೂ ಸ್ಮಾರ್ಟ್​ ಸಿಟಿ ಕಾಮಗಾರಿ ಬಗ್ಗೆ ನಾಗರಿಕರಲ್ಲಿ ಅಸಮಾಧಾನವಿದೆ. ಅವರಿಗಷ್ಟೇ ಅಲ್ಲ ನನ್ನ ಕಣ್ಣಲ್ಲೂ ಸ್ಮಾರ್ಟ್​ ಕಾಣುತ್ತಿಲ್ಲ. ಈ ಹಿನ್ನೆಲೆ ಸ್ಮಾರ್ಟ್​ ಕಾಮಗಾರಿ ತನಿಖೆಗೆ ಸೂಚಿಸಲಾಗಿದೆ. ಆದರೆ ಏರ್ಪೋರ್ಟ್​ ಕಾಮಗಾರಿ ಚೆನ್ನಾಗಿ ಆಗಿದೆ, ಆದರೆ ಅದಕ್ಕಾಗಿ ಬೇಕಾಬಿಟ್ಟಿ ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಇದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

ಹುಣಸೋಡು ಸ್ಫೋಟ ಪ್ರಕರಣದ ಫೈಲ್ ತೆಗೆಯಲಾಗುವುದು. ಅಷ್ಟೇ ಅಲ್ಲ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments