Saturday, May 18, 2024

ಸೂಪರ್​ ಸ್ಟಾರ್​ ರಜನಿಕಾಂತ್​ ವಿರುದ್ದ ನಟಿ ರೋಜ ಕೆಂಡಾಮಂಡಲ!

ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸ್ಕಿಲ್​ ಹಗರಣದಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ಅರೆಸ್ಟ್​ಮಾಡಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ವಿಚಾರವಾಗಿ ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್​ ಅವರಿಗೆ ಕರೆ ಮಾಡಿ ಮಾತನಾಡಿರುವುದನ್ನು ಸಚಿವೆ ರೋಜಾ ಖಂಡಿಸಿದ್ದಾರೆ.

ನಟ ರಜನಿಕಾಂತ್​ ಅವರು ನಾಯ್ಡು ಅವರ ಪುತ್ರ ನಾರಾ ಲೋಕೇಶ್​ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಇದನ್ನು ಆಂಧ್ರ ರಾಜ್ಯದ ಪರಿಸರ ಸಚಿವೆ ಹಾಗೂ ನಟಿ ರೋಜಾ ಖಂಡಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ: ಕೇಂದ್ರ ಸಚಿವರಿಗೆ ಸಿಎಂ ಪತ್ರ

ನಾಯ್ಡು ಅವರನ್ನು ಬೆಂಬಲಿಸುವುದರಿಂದ ರಜನಿ ಅವರ ಗೌರವ ಕಡಿಮೆಯಾಗುತ್ತದೆ. ಜನ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಭಾವಿಸಿ ರಜನಿ ರಾಜಕೀಯಕ್ಕೆ ಬರಲಿಲ್ಲ ಎಂದು ರೋಜಾ ಆರೋಪಿಸಿದ್ದಾರೆ. ಜನಕಲ್ಯಾಣಕ್ಕಾಗಿ ಜೈಲಿಗೆ ಹೋಗಿ ಬಂದವರನ್ನು ಬೆಂಬಲಿಸಿದರೆ ಸರಿ ಆದರೆ, ರಜನಿಕಾಂತ್​ ಕಳ್ಳರನ್ನು ಏಕೆ ಬೆಂಬಲಿಸುತ್ತಾರೆ? ಎಂಬ ಪ್ರಶ್ನಿಸಿದ್ದಾರೆ.

ಚಂದ್ರಬಾಬು ನಾಯ್ಡು ಒಳ್ಳೆಯವರು ಎಂದು ಹೇಳಿದರೆ ಜನ ನಂಬುವುದಿಲ್ಲ. ಹಣ ದೋಚುವವರಿಗೆ ಸಾಂತ್ವನ ಹೇಳುವುದರ ಅರ್ಥವೇನು? ಅವರು ಜನರಿಗೆ ಯಾವ ಸಂದೇಶವನ್ನು ರವಾನಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ರೋಜಾ ರಜನಿಕಾಂತ್​ ಅವರನ್ನು ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES