Saturday, May 4, 2024

ಕಬ್ಬು ತುಂಬಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವು

ಚಿಕ್ಕಮಂಗಳೂರು : ಕಬ್ಬಿನ ಲಾರಿಯೊಂದಕ್ಕೆ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಬಳಿ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿಯಾದ ಚಾಲಕ ಪ್ರಕಾಶ್ (44) ಹಾಗೂ ಕ್ಲೀನರ್ ಮಹದೇವಸ್ವಾಮಿ (42) ಮೃತ ದುರ್ದೈವಿಗಳು. ಎಂಬುವವರು ಲಾರಿಯೊಂದರಲ್ಲಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದರು.

ಈ ವೇಳೆ ಗುಂಡಾಲ್ ಬಳಿ ಬಂದಾಗ ಲಾರಿಗೆ ಹೆಚ್ಚಿನ ಕಬ್ಬು ತುಂಬಿದ್ದ ಹಿನ್ನೆಲೆ ಲಾರಿಗೆ ವಿದ್ಯುತ್ ತಂತಿ ತಗುಲಿ ಡ್ರೈವರ್ ಮತ್ತು ಕ್ಲೀನರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಪೋಲಿಸರು ಭೇಟಿ ನೀಡಿದರು.

ಇದನ್ನು ಓದಿ  : ಅವರೆಲ್ಲಾ ಸಮಾಜವಾದಿಗಳಲ್ಲ ಮಜವಾದಿಗಳು: ಸಿಎಂ ವಿರುದ್ದ ಬಿ.ಕೆ ಹರಿಪ್ರಸಾದ್​ ವಾಗ್ದಾಳಿ!

ಬಳಿಕ ಈ ಅವಘಡಕ್ಕೆ ವಿದ್ಯುತ್ ತಂತಿಗಳು ಜೋತು ಬಿದ್ದಿರುವ ಹಿನ್ನೆಲೆ ಈ ಅವಘಡಕ್ಕೆ ಕಾರಣ ಎಂಬ ಶಂಕೆಯಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES