ನಂದ್ಯಾಲ : ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸ್ಕಿಲ್ ಹಗರಣಕ್ಕೆ ಸಂಬಂಧಿಸಿಂದತೆ ಚಂದ್ರಬಾಬು ನಾಯ್ಡು ಅವರನ್ನು ಕಳೆದ ರಾತ್ರಿ ನಂದ್ಯಾಲದಲ್ಲಿ ಬಂಧನ ಮಾಡಲಾಗಿದೆ. ಸ್ಕಿಲ್ ಹಗರಣದ A1 ಆರೋಪಿಯಾಗಿರುವ ಚಂದ್ರಬಾಬು ನಾಯ್ಡು ಅವರನ್ನು ಹಗರಣಕ್ಕೆ ಸಂಬಂಧಿಸಿ ಸೂಕ್ತವಾದ ಉತ್ತರಗಳನ್ನು ನೀಡದ ಹಿನ್ನೆಲೆ ಬಂಧನ ಮಾಡಲಾಗಿದೆ.
ಇದನ್ನೂ ಓದಿ: ಜಿ-20 ಶೃಂಗಸಭೆ : ದೆಹಲಿಗೆ ಬಂದಿಳಿದ ‘ದೊಡ್ಡಣ್ಣ’ನ ಬರಮಾಡಿಕೊಂಡ ಮೋದಿ
ಹೈಕೋರ್ಟ್ ಸೂಚನೆ ಮೇರೆಗೆ ನಂದ್ಯಾಲದಲ್ಲಿ ಖಾಸಗಿ ಕಾರ್ಯಾಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಆಂಧ್ರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಬಂಧನ ಮಾಡಿದ ಸ್ಥಳಕ್ಕೆ ತೆಲುಗು ದೇಶಂ ಪಾರ್ಟಿಯ ಮುಖಂಡರು ದಾವಿಸಿದ್ದು ಘಟನಾ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿದ.