Friday, September 20, 2024

ಡಿ.ಕೆ ಶಿವಕುಮಾರ್ ನಾಟಕ ಮಾಡಿದ್ರು : ವಿಜಯೇಂದ್ರ

ಬೆಂಗಳೂರು : ಡಿ.ಕೆ ಶಿವಕುಮಾರ್ ಅವರು ಮೇಕೆದಾಟುಗೆ ಪಾದಯಾತ್ರೆ ನಾಟಕ ಮಾಡಿದ್ರು. ಬಜೆಟ್​ನಲ್ಲಿ ಈಗ ಎಷ್ಟು ಹಣ ಮೀಸಲಿಟ್ಟಿದ್ದಾರೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಗುಡುಗಿದರು.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮೇಲೆ ಯಾಕೆ ಗೂಬೆ ಕೂರಿಸುವ ಕೆಲಸ ಮಾಡ್ತೀರಿ. ಹೋರಾಟಗಾರರ ಧ್ವನಿ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ ಎಂದು ದೂರಿದರು.

ರಾಜ್ಯದ ಜನ, ರೈತರು ಕಾಂಗ್ರೆಸ್​ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಮಾಡ್ತಿದಾರೆ. ರೈತರಿಗೆ ವಿದ್ಯುತ್ ಒಂದೆರಡು ಗಂಟೆ ಕೂಡ ಸಿಕ್ತಿಲ್ಲ. 200 ಯೂನಿಟ್ ವಿದ್ಯುತ್ ಭರವಸೆ ಒಂದು ಕಡೆ, ಇನ್ನೊಂದು ಕಡೆ ರೈತರಿಗೆ ವಿದ್ಯುತ್ ಇಲ್ಲದೆ ಪರದಾಟ ಎಂದು ವಾಗ್ದಾಳಿ ನಡೆಸಿದರು.

ಸತ್ಯವನ್ನು ಮರೆಮಾಚುವ ಕೆಲಸ

ಕಾವೇರಿ ವಿಚಾರದಲ್ಲಿ ರೈತ ಸಂಘ ಕೋರ್ಟ್ ಗೆ ಹೋಗಿದೆ. ಈ ಸರ್ಕಾರ ರೈತರ ವಿಚಾರದಲ್ಲಿ ಕಳ್ಳಾಟ ಆಡುತ್ತಿದೆ. ಪ್ರಾಮಾಣಿಕವಾಗಿ ಕೋರ್ಟ್ ನಲ್ಲಿ ವಾದಿಸುತ್ತಿಲ್ಲ. ಸತ್ಯವನ್ನು ಸರ್ಕಾರ ಮರೆಮಾಚುವ ಕೆಲಸ ಮಾಡ್ತಿದೆ. ಅದಕ್ಕಾಗಿ ರೈತ ಸಂಘ ಕೋರ್ಟ್ ಮೊರೆ ಹೋಗಿದೆ. ರೈತರಿಗೆ ಈ ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ಇನ್ನಾದರೂ ಸರ್ಕಾರ ಸ್ಪಂದಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

RELATED ARTICLES

Related Articles

TRENDING ARTICLES