Friday, May 17, 2024

ಎಣ್ಣೆ ಕೊಟ್ಟಿಲ್ಲ ಎಂದು ಬಾರ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ

ಶಿವಮೊಗ್ಗ : ಬಾರ್ ಮುಚ್ಚುವ ಸಂದರ್ಭದಲ್ಲಿ ಬಂದಾಗ ಎಣ್ಣೆ ಕೊಟ್ಟಿಲ್ಲ ಅಂತ ಬಾರ್​ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನಗರದ ಬಿ.ಹೆಚ್. ರಸ್ತೆಯಲ್ಲಿರುವ ಬ್ಲೂ ಮೂನ್ ಬಾರ್​ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇಬ್ಬರು ಬಾರ್ ಸಿಬ್ಬಂದಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ನಿತ್ಯ ರಾತ್ರಿ 11.30ಕ್ಕೆ ಬಾರ್ ಕ್ಲೋಸ್​ ಆಗುತ್ತದೆ. ಆದರೆ, ಬಾರ್​ ಆ್ಯಂಡ್ ರೆಸ್ಟೋರೆಂಟ್​ನವರು ತಲೆ ಬಿಸಿ ಬೇಡ ಅಂತ 11.10ಕ್ಕೆಲ್ಲಾ ಮುಂದಿನ ಡೋರ್ ಕ್ಲೋಸ್ ಮಾಡಿ, ಒಳಗಿದ್ದವರನ್ನ ಹೊರಕ್ಕೆ ಕಳುಹಿಸುವ ಕೆಲಸದಲ್ಲಿ ತೊಡಗುತ್ತಾರೆ. ಇದು ಎಲ್ಲಾ ಬಾರ್​ ಗಳಲ್ಲಿಯು ಸಾಮಾನ್ಯ ಸಂಗತಿ.

ಹೀಗೆ ಬ್ಲೂ ಮೂನ್​ ಬಾರ್​ನಲ್ಲಿಯು ಸಿಬ್ಬಂದಿ ಹೊರಗಡೆ ಡೋರ್ ಹಾಕಿದ್ದರು. ಬಳಿಕ ಒಳಗಿದ್ದ ಗ್ರಾಹಕರೊಬ್ಬರು, ಹೊರಗೆ ಹೋಗುವಾಗ ಡೋರ್ ಓಪನ್​ ಮಾಡಿದ್ದಾರೆ. ಆಗ ಕೆಲವು ಯುವಕರು ಒಳಗೆ ಬಂದು ಮದ್ಯ(ಎಣ್ಣೆ) ಕೇಳಿದ್ದಾರೆ. ಎಣ್ಣೆ ಇಲ್ಲ ಅಂದಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ, ರಸ್ತೆಯಲ್ಲಿ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಓರ್ವ ಯುವಕನಿಗೆ ತೀವ್ರ ಪೆಟ್ಟಾಗಿದೆ.

RELATED ARTICLES

Related Articles

TRENDING ARTICLES