Monday, May 6, 2024

ಶ್ರೀರಂಗಪಟ್ಟಣದಲ್ಲಿ ಮುಂದುವರಿದ ಕಾವೇರಿ ಹೋರಾಟ

ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಹಿನ್ನೆಲೆ ತಲೆ ಮೇಲೆ ಕಲ್ಲು ಹೊತ್ತು ರೈತರ ಪ್ರತಿಭಟನೆ ಘಟನೆ ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಮಿನಿ ವಿಧಾನದ ಬಳಿ ನಡೆದಿದೆ.

ರಾಜ್ಯ ಸರ್ಕಾರ ತಮಿಳು ನಾಡಿಗೆ ನೀರು ಬಿಟ್ಟಿರುವ ಹಿನ್ನೆಲೆ ರಾಜ್ಯದಲ್ಲಿ ಆಕ್ರೋಶಕ್ಕೆ ಒಳಗಾಗಿರುವ ರೈತರು. ತಮಿಳುನಾಡಿಗರ ನೀರು ಬಿಟ್ಟು ಕರ್ನಾಟಕದ ರೈತರ ತಲೆ ಮೇಲೆ ಕಲ್ಲು ಚಪ್ಪಡಿ ಹಾಕಿದ ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ.

ಇದನ್ನು ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ

ಅಷ್ಟೇ ಅಲ್ಲದೆ ಪ್ರತಿಭಟನೆಯಲ್ಲಿ ತಲೆ ಮೇಲೆ ಚಪ್ಪಲಿ ಮತ್ತು ಕಲ್ಲು ಹೊತ್ತು, ಭೂಮಿ ತಾಯಿ ಹೋರಾಟ ಸಮಿತಿ ಹಾಗೂ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರ ನೇತೃತ್ವದ ಮೂಲಕ  ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಮಿನಿ ವಿಧಾನಸೌಧದವರೆಗೂ ಮೆರವಣಿಗೆ ಮಾಡಿದ್ದಾರೆ.

ಪ್ರತಿಭಟನೆ ಮೆರವಣಿಗೆ ಬಂದ ಅನ್ನದಾತರು ಮಿನಿ ವಿಧಾನಸೌಧನಕ್ಕೆ ಮುತ್ತಿಗೆ ಹಾಕಿ ಧರಣಿ ಕೂತಿರುವ ರೈತರು.

RELATED ARTICLES

Related Articles

TRENDING ARTICLES