Saturday, September 28, 2024

ಚಕ್ರವರ್ತಿ ಸೂಲಿಬೆಲೆ ವಿರುದ್ದ ಎಫ್​ಐಆರ್​ ದಾಖಲು!

ಶಿವಮೊಗ್ಗ : ಅವಹೇಳನಕಾರಿ ಕಮೆಂಟ್ ಮಾಡಿದ ಕಾರಣಕ್ಕೆ ಚಕ್ರವರ್ತಿ ಸೂಲಿಬೆಲೆ ವಿರುದ್ದ ಶಿವಮೊಗ್ಗದ ವಿನೋಬನಗರ ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ.

ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ IPC ಸೆಕ್ಷನ್ 504, 509 ರ ಅಡಿಯಲ್ಲಿ ಕೆಪಿಸಿಸಿ ಸೋಷಿಯಲ್​ ಮೀಡಿಯಾ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್​ ಆ. 24 ರಂದು ದೂರು ದಾಖಲಿಸಿದ್ದಾರೆ.

ಇದನ್ನೂಓದಿ: ವಿಶ್ವ ಅಥ್ಲೆಟಿಕ್ಸ್​ ನಲ್ಲಿ ನೀರಜ್ ಚಿನ್ನದ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ

ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್​ಬುಕ್​ ನಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ಅವಹೇಳನಕಾರಿಯಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು.

ಕೆಪಿಸಿಸಿ ಜಾಲತಾಣ ಉಪಾಧ್ಯಕ್ಷೆ ಸೌಗಂಧಿಕ ಅವರು ಫೇಸ್​ಬುಕ್​ ಜಾಲತಾಣದ ಕಮೆಂಟ್​ ಬಾಕ್ಸ್​ನಲ್ಲಿ  ಚಂದ್ರಯಾನದ ಬಗ್ಗೆ ಮಾಡಿದ್ದ ಕಮೆಂಟ್​ಗೆ ಪ್ರತಿಯಾಗಿ ಚಕ್ರವರ್ತಿ ಸೂಲಿಬೆಲೆಯವರು ನಿನಗೆ ಯಾಕೆ, ಎಲ್ಲಿ ಉರಿ ಬಂತೋ ಗೊತ್ತಾಗಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ. ಈ ರೀತಿ ಕಮೆಂಟ್​ ಮಾಡುವ ಮೂಲಕ ತಮ್ಮನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗದ ವಿನೋಬ ನಗರ ಪೊಲೀಸರಿಗೆ ದೂರು ಸೌಂಗಧಿಕ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES