Saturday, May 18, 2024

ನಟ ಉಪೇಂದ್ರ ವಿರುದ್ದದ ಎಫ್​ಐಆರ್​ ಗೆ ತಡೆ ನೀಡಿದ ಹೈಕೋರ್ಟ್​!

ಬೆಂಗಳೂರು : ಆಕ್ಷೇಪಾರ್ಹ ಪದ ಬಳಕೆಯ ಪ್ರಕರಣದಲ್ಲಿ ನಟ ಉಪೇಂದ್ರ ವಿರುದ್ದದ ಎಫ್​ಐಆರ್​ ಗೆ ತಡೆ ನೀಡುವ ಮೂಲಕ ನ್ಯಾಯಾಲಯ ಬಿಗ್​ ರಿಲೀಫ್​ ನೀಡಿದೆ.

ನಟ ಉಪೇಂದ್ರ ಅವರ ವಿರುದ್ದ ಪರಿಶಿಷ್ಟ ಜಾತಿ ಸಮುದಾಯವನ್ನು ನಿಂದನೆ ಮಾಡುವ ರೀತಿಯಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಚನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

ಇದನ್ನೂ ಓದಿ: ಉಪೇಂದ್ರ ಆ ಪದ ಬಳಸಿದ್ದಾರೆ, SORRYನೂ ಕೇಳಿದ್ದಾರೆ : ಛಲವಾದಿ ನಾರಾಯಣಸ್ವಾಮಿ

ತಮ್ಮ ವಿರುದ್ದ ದಾಖಲಾಗಿರುವ ಎಫ್​ಐಆರ್​ ಗೆ ತಡೆ ನೀಡುವಂತೆ ಕೋರಿ ಉಪೇಂದ್ರ ತಮ್ಮ ವಕೀಲರ ಮೂಲಕ ಇಂದು ನ್ಯಾಯಾಲಯ ಮೆಟ್ಟಿಲೇರಿದ್ದರು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್​ ಚಂದನ್​ ಅವರಿದ್ದ ನ್ಯಾಯಪೀಠ ಇಬ್ಬರ ವಾದವಿವಾದಗಳನ್ನು ಆಲಿಸಿದರು.

ಉಪೇಂದ್ರ ಪರ ವಾದ ಮಂಡಿಸಿದ ವಕೀಲ ಉದಯ್ ಹೊಳ್ಳ ಅವರು, ಕೇವಲ ಗಾದೆ ಮಾತು ಉಲ್ಲೇಖಿಸಿ ನಟ ಉಪೇಂದ್ರ ಹೇಳಿಕೆ ನೀಡಿದ್ದಾರೆ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರ ವಿರುದ್ದ ಹಲವು ಪೊಲೀಸ್​ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಗಾದೆ ಬಳಸಿದ್ದಕ್ಕೆ ಇಷ್ಟೊಂದು FIR ಯಾಕೆ? ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಹೇಮಂತ್​​ ಚಂದನ್​ ಅವರು ಚನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್​ಠಾಣೆಯಲ್ಲಿ ಸಲ್ಲಿಕೆಯಾಗಿರುವ ಎಫ್​ಐಆರ್​ ಗೆ ತಡೆ ನೀಡಿದೆ.

ನ್ಯಾಯಾಲಯದ ತೀರ್ಪಿನಿಂದ ನಟ ಉಪೇಂದ್ರ ಅವರಿಗೆ ಬಿಗ್​ ರಿಲೀಫ್​ ಸಿಕ್ಕಿದೆ.

RELATED ARTICLES

Related Articles

TRENDING ARTICLES