Friday, May 17, 2024

ರೈಲಿಗೆ ಸಿಲುಕಿ ಪ್ರೇಮಿಗಳು ಸಾವು!

ರಾಮನಗರ : ಬೆಳ್ಳಂಬೆಳಿಗ್ಗೆ ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಸಮೀಪದ ಕುಂಬಾಪುರ ಗೇಟ್ ಬಳಿ ನಡೆದಿದೆ.

ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ಪುನೀತ್​ ಕೆರೆಹಳ್ಳಿ ಬಂಧನ!

ನವ್ಯಶ್ರೀ ಹಾಗೂ ಹರ್ಷ ಮೃತ ಪ್ರೇಮಿಗಳು. ನೆಲಮಂಗಲ ಮೂಲದವರಾದ ಪ್ರೇಮಿಗಳು, ಇಂದು ಬೆಳಗ್ಗೆ 6.30 ಕ್ಕೆ ಪಲ್ಸರ್​ ಬೈಕ್​ನಲ್ಲಿ ಬಂದಿದ್ದು ಬಳಿಕ ರೈಲಿಗೆ ಸಿಕ್ಕಿ ಪ್ರಾಣ ಬಿಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಆಗಮಿಸಿದ್ದು ಮೃತ ಪ್ರೇಮಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES