Friday, September 20, 2024

ವಾತಾವರಣದಲ್ಲಿ ಏರುಪೇರು: ಮಕ್ಕಳಲ್ಲಿ ಕಾಣಿಸಿಕೊಂಡ ಮದ್ರಾಸ್ ಐ ರೋಗ

ಹುಬ್ಬಳ್ಳಿ : ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಶೀತ ಜ್ವರದಂತಹ ಹಲವು ಕಾಯಿಲೆಗಳು ಕಂಡುಬರುತ್ತಿವೆ. ಇದರ ಜೊತೆಗೆ ಮದ್ರಾಸ್ ಐ ಬೇನೆ ಕಾಯಿಲೆ ಶುರುವಾಗಿದ್ದು, ಧಾರವಾಢ ಜಿಲ್ಲೆಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಈ ಭಾರಿ ಮಳೆ, ಬಿಸಿಲು ಮಿಶ್ರಿತ ವಾತಾವರಣದ ಪ್ರಭಾವದಿಂದ ಶೀತ, ನೆಗಡಿ ಕೆಮ್ಮಿನಂತಹ ಕಾಯಿಲೆಗಳು ಶುರುವಾಗಿವೆ. ಇದರೊಂದಿಗೆ ವಾಂತಿ, ಭೇದಿಯೂ ಕಾಣಿಸಿಕೊಂಡಿದ್ದು, ಕಿಮ್ಸ್ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿರುವ ರೋಗಿಗಳ ಸಂಖ್ಯೆ.

ಇದನ್ನು ಓದಿ : ಕಾವೇರಿ ನೀರಿಗಾಗಿ ತಮಿಳುನಾಡು ಮತ್ತೆ ಖ್ಯಾತೆ! 30 ಸಾವಿರ ಕ್ಯೂಸೆಕ್ಸ್​ ನೀರಿಗೆ ಒತ್ತಾಯ

ಇದರೊಂದಿಗೆ ಜುಲೈ ತಿಂಗಳ ಕೊನೆಯಲ್ಲಿ ಹಾಗೂ ಆಗಸ್ಟ್‌ ಮೊದಲ ವಾರದಲ್ಲಿ ಸುರಿದ ನಿರಂತರ ಮಳೆಯಿಂದ ವಾತಾವರಣದಲ್ಲಿ ವಿಪರೀತ ಬದಲಾವಣೆಯಾಗಿದೆ. ಶೀತ, ನೆಗಡಿಯಂತಹ ಕಾಯಿಲೆ ಜೊತೆಗೆ ಜಿಲ್ಲೆಯ ಮಕ್ಕಳಲ್ಲಿ ಕಾಣಿಸಿಕೊಂಡ ಮದ್ರಾಸ್ ಐ ಬೇನೆ ಕಾಯಿಲೆ. ಈ ರೋಗ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಾಯಿಲೆಗೆ ಒಳಗಾದ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಜಿಲ್ಲಾ ಆಸ್ಪತ್ರೆ ಸೇರಿದಂತೆ ಕಿಮ್ಸ್ ಆಸ್ಪತ್ರೆಯಲ್ಲಿನ ಮಕ್ಕಳ ವಿಭಾಗಗಳಲ್ಲಿ ಪುಲ್ ರಶ್.

ಈ ಮದ್ರಾಸ್ ಐ ಬೇನೆ ಕಾಯಿಲೆಯಿಂದಾಗಿ ಎಲ್ಲಾ ಮಕ್ಕಳು ಕಾಯಿಲೆಗೆ ಒಳಗಾಗುತ್ತಿದ್ದು, ಈ ಸಮಸ್ಯೆಯಿಂದಾಗಿ ಆತಂಕಗೊಂಡಿರುವ ಪೋಷಕರು ಮತ್ತು ಶಿಕ್ಷಕ ವೃಂದದವರು.

RELATED ARTICLES

Related Articles

TRENDING ARTICLES