Sunday, May 19, 2024

Power Impact : ಪವರ್ ಟಿವಿ ವರದಿ ಬಳಿಕ ಕಸದ ಡಬ್ಬಿಗಳ ಹಂಚಿಕೆ

ಬೆಂಗಳೂರು : ಹಾವೇರಿಯಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆ ಹಳ್ಳ ಹಿಡಿದಿತ್ತು. ಮನೆ-ಮನೆಯಿಂದ ಕಸ ಸಂಗ್ರಹಿಸಲು ಹಾವೇರಿ ನಗರಸಭೆ ಖರೀದಿಸಿದ್ದ 32 ಸಾವಿರ ಕಸದ ಡಬ್ಬಿಗಳು ರಂಗಮಂದಿರಲ್ಲೇ ಧೂಳು ಹಿಡಿದು ಕುಳಿತಿದ್ದವು.

ಈ ಬಗ್ಗೆ ಪವರ್ ಟಿವಿ ವರದಿ ಮಾಡಿದ್ದು, ಈ ಬೆನ್ನಲ್ಲೆ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಕಸದ ಡಬ್ಬಿಗಳನ್ನು ಉಪಸಭಾಪತಿ ರುದ್ರಪ್ಪ ಲಮಾಣಿಯವರ ನೇತೃತ್ವದಲ್ಲಿ ಹಂಚಿಕೆ ಮಾಡಿದ್ದಾರೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ 32,350 ಡಸ್ಟ್​​​ಬಿನ್ ಖರೀದಿಸಿ ಐದಾರು ತಿಂಗಳುಗಳೇ ಕಳೆದು ಹೋಗಿತ್ತು. ಇವುಗಳ ಖರೀದಿಗಾಗಿ 46 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿತ್ತು. ನಗರದ 31 ವಾರ್ಡ್‌ಗಳಲ್ಲಿರುವ 16,175 ಮನೆಗಳಿಗೆ ಡಸ್ಟ್​ಬಿನ್ ವಿತರಣೆ ಮಾಡಬೇಕಿತ್ತು. ಆದರೆ, ಮನೆಗಳಿಗೆ ಈ ಡಬ್ಬಿಗಳನ್ನು ಹಂಚದೇ ನಿರ್ಲಕ್ಷ್ಯವಹಿಸಲಾಗಿತ್ತು. ಇದೀಗ ಎಲ್ಲಾ ಡಸ್ಟ್​​ಬಿನ್​​ಗಳನ್ನು ಹಂಚಲಾಗಿದೆ.

RELATED ARTICLES

Related Articles

TRENDING ARTICLES