ಬೆಂಗಳೂರು: ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಸಿಎಂ ಹೆಚ್ಡಿಕೆ ಟ್ವೀಟ್ ಸಮರ!
ಮೃತ ಸ್ಪಂದನಾ ತಮ್ಮ ಸ್ನೇಹಿತರೊಂದಿಗೆ ಕೆಲ ದಿನಗಳ ಹಿಂದೆ ಯೂರೋಪ್ ಪ್ರವಾಸದಲ್ಲಿದ್ದರು, ಈ ವೇಳೆ ಅವರಿಗೆ ಲೋಬಿಪಿ ಕಾಣಿಸಿಕೊಂಡಿದ್ದು ಹೃದಯಾಘಾತವಾಗಿ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದರು. ವಿಚಾರ ತಿಳಿಯುತ್ತಿದ್ದಂತೆ ನಟ ವಿಜಯ್ ರಾಘವೇಂದ್ರ ಥೈಯ್ಲಾಂಡ್ ತೆರಳಿದ್ದರು.
ಸದ್ಯ ಸ್ಪಂದನಾ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು ಥೈಯ್ಲಾಂಡ್ ನಲ್ಲಿ ಎಲ್ಲಾ ಕಸ್ಟಮ್ಸ್ ಕ್ಲಿಯೆರೆನ್ಸ್ ಪ್ರಕ್ರಿಯೆ ಮುಗಿಸಿ ಇಂದು ಸಂಜೆ 7 ಗಂಟೆ ವೇಳೆಗೆ ಥೈಯ್ಲಾಂಡ್ ನಿಂದ ಪಾರ್ಥೀವ ಶರೀರ ರವಾನೆಯಾಗಲಿದ್ದು ರಾತ್ರಿ 1 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.
ಸ್ಪಂದನಾ ಅಂತ್ಯಕ್ರಿಯೆ ಎಲ್ಲಿ?
ಮೃತ ಸ್ಪಂದನಾ ಪಾರ್ಥೀವ ಶರೀರ ಮಧ್ಯರಾತ್ರಿ 1 ಗಂಟೆಗೆ ಆಗಮಿಸಲಿದ್ದು, ಈ ಹಿನ್ನೆಲೆ ಸ್ಪಂದನಾ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ಮಾಡಬೇಕೋ ಅಥವಾ ಬೆಳ್ತಂಗಡಿಯಲ್ಲಿ ಮಾಡಬೇಕೋ ಎಂಬುದರ ಬಗ್ಗೆ ಕುಟುಂಬಸ್ಥರು ಇಂದು ತೀರ್ಮಾನಿಸಲಿದ್ದಾರೆ. ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು ನಾಳೆ ಸ್ಪಂದನಾ ಅಂತ್ಯಸಂಸ್ಕಾರ ನಡೆಯಲಿದೆ.