Friday, May 17, 2024

ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಸ್ಪಂದನಾ ಪಾರ್ಥೀವ ಶರೀರ!

ಬೆಂಗಳೂರು: ಸ್ಯಾಂಡಲ್​ವುಡ್​ ನಟ ವಿಜಯ್​ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ದ ಮಾಜಿ ಸಿಎಂ ಹೆಚ್​ಡಿಕೆ ಟ್ವೀಟ್​ ಸಮರ!

ಮೃತ ಸ್ಪಂದನಾ ತಮ್ಮ ಸ್ನೇಹಿತರೊಂದಿಗೆ ಕೆಲ ದಿನಗಳ ಹಿಂದೆ ಯೂರೋಪ್​ ಪ್ರವಾಸದಲ್ಲಿದ್ದರು, ಈ ವೇಳೆ ಅವರಿಗೆ ಲೋಬಿಪಿ ಕಾಣಿಸಿಕೊಂಡಿದ್ದು ಹೃದಯಾಘಾತವಾಗಿ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದರು. ವಿಚಾರ ತಿಳಿಯುತ್ತಿದ್ದಂತೆ ನಟ ವಿಜಯ್​ ರಾಘವೇಂದ್ರ ಥೈಯ್ಲಾಂಡ್​ ತೆರಳಿದ್ದರು.

ಸದ್ಯ ಸ್ಪಂದನಾ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು ಥೈಯ್ಲಾಂಡ್​ ನಲ್ಲಿ ಎಲ್ಲಾ ಕಸ್ಟಮ್ಸ್​ ಕ್ಲಿಯೆರೆನ್ಸ್​ ಪ್ರಕ್ರಿಯೆ ಮುಗಿಸಿ ಇಂದು ಸಂಜೆ 7 ಗಂಟೆ ವೇಳೆಗೆ ಥೈಯ್ಲಾಂಡ್​ ನಿಂದ ಪಾರ್ಥೀವ ಶರೀರ ರವಾನೆಯಾಗಲಿದ್ದು ರಾತ್ರಿ 1 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.

ಸ್ಪಂದನಾ ಅಂತ್ಯಕ್ರಿಯೆ ಎಲ್ಲಿ?

ಮೃತ ಸ್ಪಂದನಾ ಪಾರ್ಥೀವ ಶರೀರ ಮಧ್ಯರಾತ್ರಿ 1 ಗಂಟೆಗೆ ಆಗಮಿಸಲಿದ್ದು, ಈ ಹಿನ್ನೆಲೆ ಸ್ಪಂದನಾ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ಮಾಡಬೇಕೋ  ಅಥವಾ ಬೆಳ್ತಂಗಡಿಯಲ್ಲಿ ಮಾಡಬೇಕೋ ಎಂಬುದರ ಬಗ್ಗೆ ಕುಟುಂಬಸ್ಥರು ಇಂದು ತೀರ್ಮಾನಿಸಲಿದ್ದಾರೆ. ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದ್ದು ನಾಳೆ ಸ್ಪಂದನಾ ಅಂತ್ಯಸಂಸ್ಕಾರ ನಡೆಯಲಿದೆ.

RELATED ARTICLES

Related Articles

TRENDING ARTICLES