ಮೈಸೂರು: ಗಾಂಜಾ ಅಡ್ಡಾದ ಮೇಲೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಜೈಲರ್ ಸಿನಿಮಾಗಾಗಿ ಕನ್ನಡ ಸಿನಿಮಾಗೆ ಗೇಟ್ ಪಾಸ್: ಫಿಲಂ ಚೇಂಬರ್ ಗೆ ದೂರು!
ಒರಿಸ್ಸಾ ಮೂಲದ ಬಿಕಾರಾಮ್ ನಾಯಕ್, ಜಂಶೀರ್, ನಾಯನ್ ದೀಪು, ಮಂಜು, ಅನಿಲ್ ಕುಮಾರ್, ಬಂಧಿತ ಆರೋಪಿಗಳು. ಬಂಧಿತರಿಂದ 29 ಕೆಜಿ ನಿಷೇಧಿತ ಒಣ ಗಾಂಜ ವಶಕ್ಕೆ ಪಡೆಯಲಾಗಿದೆ.
ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಬಳಿ ಇರುವ ಟಿಬೇಟಿಯನ್ ಸೆಟಲ್ಮೆಂಟ್ನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ, ಸದ್ಯ ಈ ಪ್ರಕರಣವು ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.