ಮೈಸೂರು: ಕುಮಾರಸ್ವಾಮಿ ಯಾವತ್ತು ದಾಖಲೆ ಇಲ್ಲದೆ ಏನು ಹೇಳುವುದಿಲ್ಲ ಎನ್ನುವ ಮೂಲಕ ಹೆಚ್.ಡಿ ಕುಮಾರಸ್ವಾಮಿ ಪರ ಶಾಸಕ ಜಿ ಟಿ ದೇವೇಗೌಡ ಬ್ಯಾಟ್ ಬೀಸಿದ್ದಾರೆ.
ಇದನ್ನೂ ಓದಿ: 66 ಅಡಿ ಆಳಕ್ಕೆ ಬಿದ್ದ ಹಸುಗಳು! ಮೂಕ ಪ್ರಾಣಿಗಳ ರಕ್ಷಣೆಗೆ ಹರ ಸಾಹಸ
ಮೈಸೂರಿನಲ್ಲಿ ಮಾತನಾಡಿದ ಅವರು , ಕುಮಾರಸ್ವಾಮಿ ಆರೋಪ ಮಾಡಿದ ಕಾರಣ ಆಡಳಿತದಲ್ಲಿ ಎಲ್ಲವೂ ಸರಿ ದಾರಿಗೆ ಬಂದಿದೆ, ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಪರಮೇಶ್ವರ್ ರವರು ಕುಮಾರಸ್ವಾಮಿ ಹೇಳಿದ ನಂತರ ಎಚ್ಚೆತ್ತುಕೊಂಡಿದ್ದಾರೆ.
ಇಲ್ಲಿ ಹಿಟ್ ಅಂಡ್ ರನ್ ಪ್ರಶ್ನೆಯೇ ಇಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿರುವ ನಾವು, ಸರ್ಕಾರದ ತಪ್ಪುಗಳನ್ನು ತಿಳಿಸುವುದೇ ಆಗಿದೆ, ಸದ್ಯ ಸಿದ್ದರಾಮಯ್ಯ ಆಡಳಿತ ಸರ್ಕಾರದ ಮೇಲೆ ಖಂಡಿತಾ ಪಕ್ಷದಲ್ಲೇ ಇರುವ ಶಾಸಕರಲ್ಲಿ ಅಸಮಾಧಾನ ಇದೆ ಎಂದರು.
ಸಾಲ ಸೋಲ ಮಾಡಿ ಶಾಸಕರು ಗೆದ್ದು ಬಂದಿರುತ್ತಾರೆ, ಜನ ಪರವಾಗಿ ಕೆಲಸ ಮಾಡುವಂತೆ ಕ್ಷೇತ್ರದ ಜನತೆ ಹೇಳುತ್ತಿದ್ದಾರೆ. ಆದರೇ, ಈ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ, ಹೊಸ ಕೆಲಸ ಇರಲೀ ಈ ಹಿಂದೆ ಇದ್ದ ಯೋಜನೆಗೂ ಅನುದಾನ ನೀಡುತ್ತಿಲ್ಲ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಜಿಟಿ ದೇವೇಗೌಡ ಕಿಡಿಕಾಕಾರಿದರು.