ಆನೇಕಲ್: ಬಡ್ಡಿ ದಂದೆಕೋರರ ಕಾಟ ತಾಳಲಾರದೇ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶ್ರೀನಿವಾಸ ಬಡಾವಣೆಯಲ್ಲಿ ನಡೆದಿದೆ.
ಇದನ್ನೂ ಓದಿ: ಅನುಕಂಪದ ನೇಮಕಾತಿಗೆ ಬಿತ್ತು ಬ್ರೇಕ್ ನೇಮಕಾತಿ ತಡೆಗೆ ಸೂಚನೆ!
ಮೋಹನ್ ಮೃತ ದುರ್ದೈವಿ, ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ, ಸಾಲ ಪಡೆದ ತಪ್ಪಿಗೆ ಬಡ್ಡಿ ದಂಧೆಕೋರರು ನಿತ್ಯ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು, ನೆನ್ನೆ ಸಂಜೆಯೂ ಕೂಡ ಸಾಲಗಾರರ ಕಾಟ ಮಿತಿಮೀರಿದ್ದರಿಂದ ಮನನೊಂದ ಮೋಹನ್ ನೇಣು ಬಿಗಿದುಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾನೆ,
ಆನೇಕಲ್ ತಾಲ್ಲೂಕಿನ ಸ್ಟ್ರೈಡ್ಸ್ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದ ಮೋಹನ್ ಒಂದು ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದ ಇವರ ದಾಂಪತ್ಯಕ್ಕೆ ಮೂರು ತಿಂಗಳ ಮಗು ಮಗುವು ಇತ್ತು, ಸಾಲಗಾರರ ಕಾಟಕ್ಕೆ ಸಾವನ್ನಪ್ಪಿರುವ ಮೋಹನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸದ್ಯ ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.