Saturday, May 18, 2024

‘ಭಾರತ್ ಮಾತಾ ಕಿ ಜೈ’ ಎನ್ನುವ ವಿಚಾರಕ್ಕೆ BJP-BSP ನಾಯಕರ ಕಿತ್ತಾಟ

ಉತ್ತರ ಪ್ರದೇಶ : ಕಾರ್ಯಕ್ರಮವೊಂದರ ಶಂಕುಸ್ಥಾಪನೆಯಲ್ಲಿ ‘ಭಾರತ್​​ ಮಾತಾ ಕಿ ಜೈ’ ಎನ್ನುವ ವಿಚಾರವಾಗಿ ಜನಪ್ರತಿನಿಧಿಗಳಿಬ್ಬರ ನಡುವೆ ವಾಗ್ವಾದವಾಗಿದೆ.

ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಮ್ರೋಹ ಲೋಕಸಭೆ ಕ್ಷೇತ್ರದ ಬಿಎಸ್​ಪಿ ಸಂಸದ ಕುನ್ವರ್​ ಡ್ಯಾನಿಶ್​ ಅಲಿ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ವಿಧಾನಪರಿಷತ್​ ಸದಸ್ಯ ಹರಿಸಿಂಗ್​ ದಿಲ್ಲೋನ್​​ ನಡುವೆ ಜಟಾಪಟಿ ನಡೆದಿದೆ. ಈ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಇಂದು ಅಮೃತ್​ ಭಾರತ ನಿಲ್ದಾಣದ ಯೋಜನೆಯ ಶಂಕುಸ್ಥಾಪನೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಏಕಕಾಲದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮವನ್ನೂ ನೆರವೇರಿಸಿದ್ದಾರೆ.

ಇಬ್ಬರೂ ನಾಯಕರ ನಡುವಿನ ವಾಗ್ವಾದ

ಶಂಕುಸ್ಥಾಪನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹರಿಸಿಂಗ್​ ದಿಲ್ಲೋನ್​​, ಮೊದಲಿಗೆ ‘ಭಾರತ್​​ ಮಾತಾ ಕಿ ಜೈ’ ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನೂ ಆರಂಭಿಸಿದ್ದಾರೆ. ಈ ವೇಳೆ ಇದಕ್ಕೆ ಆಕ್ಷೇಪಿಸಿದ ಸಂಸದ ಕುನ್ವರ್​ ಡ್ಯಾನಿಶ್​ ಅಲಿ ಸರ್ಕಾರಿ ಕಾರ್ಯಕ್ರಮವನ್ನೂ ನಿಮ್ಮ ಪಕ್ಷದ ವೇದಿಕೆಯನ್ನಾಗಿ ಬಳಸಿಕೊಳ್ಳಬೇಡಿ ಎಂದಿದ್ದಾರೆ.

ಈ ವಿಚಾರವಾಗಿ ಇಬ್ಬರೂ ನಾಯಕರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.

RELATED ARTICLES

Related Articles

TRENDING ARTICLES