Friday, May 17, 2024

ತಂದೆ ಮೇಲಿನ ದ್ವೇಷಕ್ಕೆ ಮಕ್ಕಳ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನ!

ರಾಜಸ್ಥಾನ: ತಂದೆಯ ಮೇಲಿನ ದ್ವೇಷಕ್ಕೆ ಪ್ರತೀಕಾರವಾಗಿ ಮೂವರು ಮಕ್ಕಳ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಮಲಿಹಾಬಾದ್​​​​ನಲ್ಲಿ ನಡೆದಿದೆ.

ಇದನ್ನೂ ಓದಿ: ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಕೋಟಿ ಕೋಟಿ ಹಣ ವಂಚನೆ: ಆರೋಪಿ ಬಂಧನ!

ಕೊಟ್ವಾಲಿಯ ಸಿಂಧರ್ ವಾದ ಕಾಜಿ ಖೇಡಾ ಗ್ರಾಮದ ನಿವಾಸಿ ಗೋವಿಂದ್ ಯಾದವ್ ಬಂಧಿತ ಆರೋಪಿ, ಘಟನೆಯಲ್ಲಿ 8 ವರ್ಷದ  ಶಿವಾನಿ, 4 ವರ್ಷದ ಸ್ನೇಹಾ ಮತ್ತು 3 ವರ್ಷದ ಕೃಷ್ಣ ಗಾಯಗೊಂಡಿದ್ದಾರೆ, ಮೂವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆದ್ದು ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಮಕ್ಕಳ ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಗೋವಿಂದ್ ಯಾದವ್ ಎಂಬಾತನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 3 ಮಕ್ಕಳ ತಂದೆ ವೀರೇಂದ್ರ ಅಲಿಯಾಸ್ ಸೀತಾರಾಮ್ ಜೊತೆ ಆರೋಪಿ ಗೋವಿಂದ ಯಾದವ್ ಗೆ ವೈಯಕ್ತಿಕ ದ್ವೇಷ ಹೊಂದಿದ್ದ ಇದೇ ಕಾರಣಕ್ಕೆ ಪ್ರತೀಕಾರವಾಗಿ ಗೋವಿಂದ್, ವೀರೇಂದ್ರ ನ ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿದ್ದನೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES