Thursday, May 9, 2024

ಜಯಚಂದ್ರ ಈ ಬಾರಿ ಚುನಾವಣೆ ಹೇಗೆ ಮಾಡಿದ್ರು ಅಂತ ನನಗೆ ಗೊತ್ತಿದೆ : ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ಟಿ.ಬಿ ಜಯಚಂದ್ರ ಮೊದಲು ಚುನಾವಣೆ ಹೇಗೆ ನಡೆಸಿದರು, ಈ ಬಾರಿ ಚುನಾವಣೆ ಹೇಗೆ ಮಾಡಿದ್ದಾರೆ ಅಂತ ನನಗೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.

ವಿಧಾನಸಭೆ ಕಲಾಪದಲ್ಲಿ ಶಾಸಕ ಬಿ.ಆರ್.ಪಾಟೀಲ್ ಇಂದಿನ ರಾಜಕೀಯ ಸ್ಥಿತಿಗತಿ ಬಗ್ಗೆ ಮಾತನಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಹೆಚ್​​.ಡಿ ಕುಮಾರಸ್ವಾಮಿ, ನಗುತ್ತಿದ್ದ ಜಯಚಂದ್ರಗೆ ಕೌಂಟರ್ ಕೊಟ್ಟರು.

ಶಾಸಕರಾದ ಮೇಲೆ ಶಾಸಕಗಿರಿ ಉಳಿಸಿಕೊಳ್ಳಲು ಮುಂದಾಗುತ್ತಾರೆ. ನಾವು 5, 10 ಸಾವಿರ ಕೊಟ್ಟರೆ ಹೋಗಿ ಚುನಾವಣೆ ಮಾಡುತ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಈ ಬಾರಿ ಚುನಾವಣೆ ಹೇಗೆ ನಡೆಯಿತು ಅಂತ ನನಗೆ ಗೊತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಬಂದ್ಮೇಲೆ ಜಿಹಾದಿ ಮನಃಸ್ಥಿತಿ ಇರೋರು ಎದ್ದು ಕೂತಿದ್ದಾರೆ : ಶ್ರೀರಾಮುಲು ಗುಡುಗು

ಚುನಾವಣೆಗೂ ಮೊದಲೇ ಕುಕ್ಕರ್

ಚುನಾವಣೆ ಘೋಷಣೆಗೂ ಮೊದಲೇ ಕುಕ್ಕರ್ ಎಲ್ಲಾ ಹಂಚಿದರು. ಇಲ್ಲೇ ಶಾಸಕ ಟಿ.ಬಿ ಜಯಚಂದ್ರ ಇದ್ದಾರೆ. ನಗುತ್ತಾ ಇದ್ದಾರೆ. ಟಿ.ಬಿ ಜಯಚಂದ್ರ ಮೊದಲು ಚುನಾವಣೆ ಹೇಗೆ ನಡೆಸಿದರು? ಈ ಬಾರಿ ಚುನಾವಣೆ ಹೇಗೆ ಮಾಡಿದ್ದಾರೆ ಅಂತ ನನಗೆ ಗೊತ್ತಿದೆ ಎಂದು ಪಂಚ್ ಕೊಟ್ಟರು.

ಚುನಾವಣೆ ವೇಳೆ ಜನ ಮೂರು ಪಕ್ಷಗಳಿಂದ ದುಡ್ಡು ಪಡೆಯುತ್ತಾರೆ. ಯಾರಿಗೆ ವೋಟು ಹಾಕಿದ್ದಾರೆ ಅಂತ ಡಬ್ಬ ಒಡೆದಾಗಲೇ ಗೊತ್ತಾಗೋದು. ಬಿ.ಆರ್ ಪಾಟೀಲ್​ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸಭಾಧ್ಯಕ್ಷರೇ, ಇದು ಯಾರಿಗೆ ಬೇಕಾಗಿದೆ. ದುಡ್ಡು ಮಾಡೋದು ಹೇಗೆ ಅನ್ನೋದರ ಬಗ್ಗೆ ‌ಎಲ್ಲರ ಗಮನ ಇದೆ ಎಂದು ಬೇಸರಿಸಿದರು.

RELATED ARTICLES

Related Articles

TRENDING ARTICLES